Select Your Language

Notifications

webdunia
webdunia
webdunia
webdunia

ಡಾಕ್ಟರ್ ಎಡವಟ್ಟಿನಿಂದ ಬಾಲಕ ಸಾವು

ಡಾಕ್ಟರ್ ಎಡವಟ್ಟಿನಿಂದ ಬಾಲಕ ಸಾವು
bangalore , ಮಂಗಳವಾರ, 10 ಅಕ್ಟೋಬರ್ 2023 (19:11 IST)
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನವರ ಮಗಳ ಒಡೆತನದ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕ ಸಾವನಾಪ್ಪಿದ್ದಾನೆ.ಇಂಜೆಕ್ಷನ್ ರಿಯಾಕ್ಷನ್ ಆಗಿ  11 ವರ್ಷದ ಪ್ರೀತಮ್ ನಾಯ್ಕ್ ಸಾವನಾಪ್ಪಿದ್ದು,ಕಳೆದ ನಾಲ್ಕು ದಿನದ‌ ಹಿಂದೆ ಅನಾರೋಗ್ಯದ ಸಮಸ್ಯೆ ಎಂದು ಆಸ್ಪತ್ರೆಗೆ ಸೇರಿಸಲಾಗಿತ್ತು.ಹೀಗಾಗಿ ಕೋಣನಕುಂಟೆಯ ರಾಜನಂದಿನಿ ಆಸ್ಪತ್ರೆಗೆ ಸೇರಿಸಲಾಗಿತ್ತು.ಆಸ್ಪತ್ರೆಯಲ್ಲಿ ಬಾಲಕನಿಗೆ ಇಂಜೆಕ್ಷನ್ ಕೊಡಲಾಗಿತ್ತು.ಇಂಜೆಕ್ಷನ್ ಕೊಟ್ಟ ಮರುದಿನವೇ ಕಾಲು ಊತ ಬಂದಿತ್ತು.ನಂತರ ಚೆಕ್ ಮಾಡಿಸಲಾಗಿ ಕಾಲು ಇನ್ಫೆಕ್ಷನ್ ಆಗಿದೆ ಎನ್ನಲಾಗಿದೆ.ಕೂಡಲೇ ಆಪರೇಷನ್ ಮಾಡಿಸಿದ್ದರೂ ಪ್ರೀತಮ್ ಸಾವನಪ್ಪಿದ್ದಾನೆ.ತನ್ನ‌ ಮಗನ ಸಾವಿಗೆ ರಾಜನಂದಿನಿ ಆಸ್ಪತ್ರೆಯ ಡಾಕ್ಟರ್ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಮಾಡಿದ್ದು,ತಂದೆ ಪ್ರಿಯನಾಯಕ್,ತಾಯಿ ಕೃಷ್ಣ ಬಾಯಿ ,ಸೆಂಟ್ ಕ್ಲೋರಿಸ್ ಶಾಲೆಯಲ್ಲಿ 5ನೇ ತರಗತಿ ಬಾಲಕ ಓದುತ್ತಿದ್ದು ಇದೀಗ ಬೆಂಗಳೂರಿನ ಕೋಣನಕುಂಟೆಯಲ್ಲಿ ಈ ಘಟನೆ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಳಪೆ ಕಾಮಗಾರಿ ಹಿನ್ನೆಲೆ ಶೆಲ್ಟರ್ ತೆರವುಗೊಳಿಸಲಾಗಿದೆ..!