Publish Date: Sun, 29 Sep 2019 (18:40 IST)
Updated Date: Sun, 29 Sep 2019 (18:42 IST)
ರಾಜ್ಯದ ಬೈ ಎಲೆಕ್ಷನ್ ನಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ 15 ಸ್ಥಾನಗಳನ್ನೂ ಗೆದ್ದೇ ಗೆಲ್ಲುತ್ತೆ.
ರಾಜ್ಯದಲ್ಲಿ ಬೈ ಎಲೆಕ್ಷನ್ ಯಾವಾಗ ನಡೆದರೂ ನಾವು ಸಿದ್ಧರಿದ್ದೇವೆ. ಹೀಗಂತ ಮಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರ್ ರಾವ್ ಹೇಳಿಕೆ ನೀಡಿದ್ದಾರೆ.
ನಳಿನ್ ಕುಮಾರ್ ಮತ್ತು ಬಿ.ಎಸ್.ಯಡಿಯೂರಪ್ಪ ನಡುವೆ ಯಾವುದೇ ವೈಮನಸ್ಸು ಇಲ್ಲ. ನಮ್ಮದು ಒಂದೇ ಪಕ್ಷ ಒಂದೇ ನಿಲುವು ಅದು ಬಿಜೆಪಿ ಪಕ್ಷ.
ಯಡಿಯೂರಪ್ಪ ಒಬ್ಬ ದೊಡ್ಡ ನಾಯಕರು ಅವರನ್ನ ಕಡೆಗಣಿಸುವ ಪ್ರಶ್ನೆಯೇ ಬರುವುದಿಲ್ಲ. ಯಡಿಯೂರಪ್ಪ ನವರೇ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ಉಳಿದಂತೆ ಎಲ್ಲರೂ ತಮ್ಮ ತಮ್ಮ ಕೆಲಸ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಹೀಗಂತ ಮುರುಳಿಧರ್ ರಾವ್ ಹೇಳಿದ್ದಾರೆ.