Publish Date: Mon, 01 Jul 2019 (16:09 IST)
Updated Date: Mon, 01 Jul 2019 (16:11 IST)
ಕಾಂಗ್ರೆಸ್ ನ ವಿಧಾನ ಸಭೆ ಸದಸ್ಯ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ ನಾನು ಯಾವುದೇ ಪಕ್ಷ ಅಥವಾ ಶಾಸಕರಿಂದ ರಾಜೀನಾಮೆ ಪತ್ರ ಸ್ವೀಕಾರ ಮಾಡೇ ಇಲ್ಲ. ಹೀಗಂತ ಸ್ಪೀಕರ್ ಹೇಳೋ ಮೂಲಕ ಹೊಸ ಚರ್ಚೆ ಶುರುವಾಗಿದೆ.
ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷಗಳ ಅಥವಾ ಯಾವುದೇ ಪಕ್ಷದ ಶಾಸಕರಿಂದ ತಾವು ರಾಜೀನಾಮೆ ಪತ್ರವನ್ನು ಸ್ವೀಕರಿಸಿಲ್ಲ. ಹೀಗಂತ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಾನು ಬಾಡಿಗೆ ಮನೆಯಲ್ಲಿ ಇದ್ದೇನೆ. ಆನಂದ್ ಸಿಂಗ್ ಅವರು ಯಾರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೋ ಗೊತ್ತಿಲ್ಲ. ಅವರು ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.
ಶಾಸಕ ಆನಂದ್ ಸಿಂಗ್ ಸೇರಿದಂತೆ ಯಾವೊಬ್ಬ ಶಾಸಕರು ತಮ್ಮ ಭೇಟಿಗಾಗಿ ಅನುಮತಿ ಪಡೆದುಕೊಂಡೇ ಇಲ್ಲ. ಹೀಗಂತ ಸ್ಪೀಕರ್ ಹೇಳಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ರಾಜೀನಾಮೆ ನೀಡಿದ್ದರು ಆನಂದ ಸಿಂಗ್.