Publish Date: Wed, 16 Aug 2023 (12:43 IST)
Updated Date: Wed, 16 Aug 2023 (12:56 IST)
ಬಿಬಿಎಂಪಿ ಆದೇಶದ ಬ್ಯಾನರ್ ಮುಂದೆ ಸಾರ್ವಜನಿಕರು ಕಸ ಹಾಕಿದ್ದಾರೆ.ಬೆಂಗಳೂರಿನ ಸಂಪಂಗಿರಾಮನಗರದ ವಾರ್ಡ್ ಒಂದರಲ್ಲಿ ಸಾರ್ವಜನಿಕರು ನಿರ್ಲಕ್ಷ್ಯ ವಜಿಸಿದ್ದಾರೆ.ಇಲ್ಲಿ ಕಸ ಹಾಕಿದವರಿಗೆ 1000 ರೂಪಾಯಿ ದಂಡ ಅಥವಾ ಶಿಕ್ಷೆ ವಿಧಿಸಲಾಗುವುದು ಎಂದು ಬಿಬಿಎಂಪಿ ಆದೇಶ ಮಾಡಿದ್ರೂ ಜನ ಡೋಂಟ್ ಕೇರ್ ಎನ್ನುತ್ತಿದ್ದಾರೆ.ಇನ್ನು ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಕೂಡ ಬಿಬಿಎಂಪಿ ಹೇಳಿದ್ರೂ ಸ್ಥಳೀಯರು ಕಸ ಹಾಕುತ್ತಿದ್ದಾರೆ.ಪಾಲಿಕೆಯ ಎಲ್ಲ ವಾರ್ಡ್ಗಳಲ್ಲೂ ಕಸ ಸಂಗ್ರಹಣೆಗೆ ಕಸದ ವಾಹನ ಬಂದು ಕ್ಲಿಯರ್ ಮಾಡುತ್ತೇ ಮರುದಿನ ಮತ್ತೆ ಅದೇ ಹಾಡು ಅದೇ ರಾಗ ಎಂಬಂತೆ ಸಾರ್ವಜನಿಕರ ವರ್ತನೆ ಮಾಡ್ತಿದ್ದಾರೆ.