Publish Date: Sat, 15 Apr 2023 (15:26 IST)
Updated Date: Sat, 15 Apr 2023 (14:47 IST)
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಎನ್ ಅಶ್ವತ್ಥ ನಾರಾಯಣ್ ಇಂದು ಕ್ಷೇತ್ರದ ವಿವಿಧ ಭಾಗಗಳಲ್ಲಿ ಮತಯಾಚನೆ ಮಾಡಿದ್ರು. ಮತದಾರರ ಕುಂದುಕೊರತೆಗಳನ್ನ ಆಲಿಸುತ್ತ ಬಿಜೆಪಿ ಗೆ ಮತ ನೀಡಿ ಮತ್ತೋಮ್ಮೆ ರಾಜ್ಯ ದಲ್ಲಿ ಭಾರತೀಯ ಜನತಾ ಪಾರ್ಟಿ ಯನ್ನ ಅಧಿಕಾರಕ್ಕೆ ತರಬೇಕೆಂದು ಮತದಾರರಿಗೆ ಮನವಿ ಮಾಡಿಕೊಂಡರು. ನೂರಾರು ಕಾರ್ಯಕರ್ತರ ಜತೆ ಮನೆ-ಮನೆಗೆ ತೆರಳಿದ್ದರು.ಅಲ್ಲದೆ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಅನೇಕ ನಾಯಕರು ಕೂಡ ಕ್ಷೇತ್ರಕ್ಕೆ ಬರುತ್ತಾರೆ. ಈ ಬಾರಿ ಕೂಡ ಗೆದ್ದು ಬರುತ್ತೇನೆ ಎಂಬ ವಿಶ್ವಾಸವಿದೆ ಎಂದರು.ಅಲ್ದೆ ಪಕ್ಷ ಸೂಚಿಸುವ ಕ್ಷೇತ್ರಗಳಿಗೆ ತೆರಳಿ ಪ್ರಚಾರ ಮಾಡುವುದಾಗಿ ತಿಳಿಸಿದ್ರು.ಬೂತ್ ಮಟ್ಟದ ಕಾರ್ಯಕರ್ತರು, ಬಿಜೆಪಿ ಯ ಮುಖಂಡರು, ಮಹಿಳಾ ಕಾರ್ಯಕರ್ತರು ಶಾಸಕರಿಗೆ ಸಾಥ್ ನೀಡಿದ್ರು.