Webdunia - Bharat's app for daily news and videos

Install App

ನನ್ನ ಮಾತು ಕೇಳಿದ್ರೆ ಇದೆಲ್ಲಾ ಆಗ್ತಿತ್ತಾ ಸಿದ್ದಣ್ಣ: ಸ್ವಾರಸ್ಯಕರ ಚರ್ಚೆಗೆ ಸಾಕ್ಷಿಯಾದ ಸೋಮಣ್ಣ- ಸಿದ್ದರಾಮಯ್ಯ

Sampriya
ಸೋಮವಾರ, 18 ನವೆಂಬರ್ 2024 (17:38 IST)
Photo Courtesy X
ಬೆಂಗಳೂರು: ಅಂದು ನನ್ನ ಮಾತು ಕೇಳಿ ಸೈಟು ವಾಪಾಸ್ ನೀಡುತ್ತಿದ್ದರೆ  ಇಂದು ಇಂತಹ ಸಂಕಷ್ಟ ಎದುರಾಗುತ್ತಿರುಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ಮುಡಾ ವಿವಾದ ಆರಂಭವಾದಾಗ ಬಿಜೆಪಿಯಲ್ಲಿನ ಕೆಲವು ಸಿದ್ದರಾಮಯ್ಯ ಸ್ನೇಹಿತರು ಸೈಟು ವಾಪಾಸ್ ನೀಡಿ, ಇದರಿಂದ ಪಾರಾಗಿ ಎಂದು ಸಲಹೆ ನೀಡಿದ್ದರು. ಅದರಲ್ಲಿ ವಿ ಸೋಮಣ್ಣ ಕೂಡಾ ಒಬ್ಬರು. ಇಂದು ಸಿಎಂ ಸಿದ್ದರಾಮಯ್ಯ ಹಾಗೂ ವಿ ಸೋಮಣ್ಣ ಅವರು ಮುಖಾಮುಖಿಯಾಗಿದ್ದು ಈ ವೇಳೆ ಮುಡಾ ವಿಚಾರ ಪ್ರಸ್ತಾಪವಾಗಿದೆ.

ಬೆಂಗಳೂರಿನ ಕಾರ್ಯಕ್ರಮದವೊಂದರಲ್ಲಿ ಉಭಯ ನಾಯಕರು ಆಕಸ್ಮಿಕವಾಗಿ ಎದುರು ಬದುರಾಗಿದ್ದು, ಕುಶಲೋಪಾರಿ ಮಾಡಿದ್ದಾರೆ. ಮೂಡಾ ವಿವಾದ ಉಲ್ಲೇಖ ಮಾಡಿದ ವಿ ಸೋಮಣ್ಣ, ತಪ್ಪು ಮಾಡಿಬಿಟ್ರಿ ಸಿದ್ದಣ್ಣ, ಸಣ್ಣ ವಿಚಾರ ಇಷ್ಟೆಲ್ಲಾ ಆಗಿಹೋಯ್ತು 'ಸೈಟ್ ವಾಪಸ್ ಕೊಡಿ ಎಂದು ನಾನು ಮೊದಲೇ ಹೇಳಿದ್ದೆ, ಸೈಟನ್ನು ಅಂದೇ ವಾಪಸ್ ಮಾಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ ಎಂದರು..

ಸಿದ್ದರಾಮಯ್ಯ ಬಗ್ಗೆ ನಾನು ಎದುರುಗಡೆ ಏನಿದ್ದರೂ ಹೇಳುವವನು. ಬೇರೆಯವರ ಹಾಗೆ ಹಿಂದುಗಡೆ ಕುತಂತ್ರ ಮಾಡುವುದು ಗೊತ್ತಿಲ್ಲ. ನನ್ನ ಮಾತು ಕೇಳಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಅವರ ಕೈ ಹಿಡಿದುಕೊಂಡು ಸೋಮಣ್ಣ ಹೇಳಿದರು.

ಅದು ಯಾವುದೋ ಒಂದು ಸಣ್ಣದು. ಅದನ್ನು ಅವತ್ತೇ ಸರೆಂಡರ್ ಮಾಡಿದ್ದರೆ ಚೆನ್ನಾಗಿತ್ತು. ಅದೊಂದು ಯಾಕೆ ಮಾಡಿದ್ದರೆ. ಅಂದೇ ಸರಿ ಮಾಡಿದ್ದರೆ ಇನ್ನೂ ಹೈಕ್ಲಾಸ್ ಇತ್ತು ಎಂದು ಸಲಹೆ ನೀಡಿದರು. ಸದನದಲ್ಲಿ ಏಕೆ ಇಷ್ಟು ಕೋಟಿ ಅಲ್ಲ, ಅಷ್ಟು ಕೋಟಿ ಎಂದು ಏಕೆ ಹೇಳಿದ್ರಿ. ನಾವು ಹೇಳಿದ್ವಾ ನಿಮಗೆ ಹೇಳೋಕೆ? ನಾನೇನು ಸದನದಲ್ಲಿ ಇದ್ನಾ? ಎಂದೂ ಪ್ರೀತಿಯಿಂದಲೇ ಸಿದ್ದರಾಮಯ್ಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಇನ್ನು ಸೋಮಣ್ಣ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನೀನು ದೇವರ ಮೇಲೆ ನಂಬಿಕೆ ಇಟ್ಕೊಂಡಿದೀಯಾ.. ನಾನು ದೇವರನ್ನ ನಂಬಲ್ಲ, ಏಯ್ ಗೊತ್ತಿಲ್ಲದೆ ಏನೆಲ್ಲಾ ಮಾತನಾಡ್ತೀಯಾ. ಹಾಗಲ್ಲಾ ನನ್ನ ಮಾತು ಕೇಳು ಎಂದು ಪ್ರಕರಣದ ಬಗ್ಗೆ ಸಮಜಾಯಿಷಿ ನೀಡಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿರುಮಲ ದೇವಸ್ಥಾನಕ್ಕೆ ರಾಜಮಾತೆ ಪ್ರಮೋದಾ ದೇವಿಯಿಂದ ಎರಡು ದೀಪಗಳ ದೇಣಿಗೆ

ಧರ್ಮಸ್ಥಳ ಮೂಲದ ಆಕಾಂಕ್ಷ ಸಾವು ಪ್ರಕರಣ: ಸಮಗ್ರ ತನಿಖೆಗೆ ಸಚಿವ ಗುಂಡೂರಾವ್ ಆಗ್ರಹ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments