Publish Date: Thu, 03 Aug 2023 (19:48 IST)
Updated Date: Thu, 03 Aug 2023 (17:51 IST)
ತನ್ನ ಅಜ್ಜಿಯ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಮೂರು ವರ್ಷದ ಪುಟಾಣಿ ಮಗುವೊಂದು ಆಯತಪ್ಪಿ ನೀರಿನ ಹೊಂಡಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಉಡುಪಿ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆ ಅರೆಮನೆ ಜಡ್ಡು ಎಂಬಲ್ಲಿ ನಡೆದಿದೆ. ನಾಲ್ಕೂರು ಗ್ರಾಮದ ಸಂತೋಷ್ ಬೋವಿ ಎಂಬುವರ ಮಗಳು ಕೃತಿಕಾ ಮೃತಪಟ್ಟ ಪುಟಾಣಿ ಬಾಲಕಿಯಾಗಿದ್ದಾಳೆ. ಕೃತಿಕಾ ತನ್ನ ಅಜ್ಜಿ ಮಂಜುಳಾ ಅವರೊಂದಿಗೆ ಸಂಕಯ್ಯ ಶೆಟ್ಟಿ ಎಂಬುವವರ ಜಾಗದಲ್ಲಿ ನಡೆದುಕೊಂಡು ಹೋಗುವಾಗ ಪಕ್ಕದಲ್ಲಿದ್ದ ನೀರಿನ ಹೊಂಡಕ್ಕೆ ಜಾರಿ ಬಿದ್ದು ಮೃತಪಟ್ಟಿದ್ದಾಳೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.