ಕಾಂತಾರ ಚಾಪ್ಟರ್ 1 ರಲ್ಲಿ ಬರುವ ಬೆರ್ಮೆ ಎಂದರೆ ಯಾರು, ಹಿನ್ನಲೆಯೇನು

Krishnaveni K
ಮಂಗಳವಾರ, 23 ಸೆಪ್ಟಂಬರ್ 2025 (11:37 IST)
Photo Credit: X
ಬೆಂಗಳೂರು: ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಈ ಸಿನಿಮಾದ ಟ್ರೈಲರ್ ನಲ್ಲಿ ಮಗುವಿನ ಕಿವಿಯಲ್ಲಿ ಬೆರ್ಮೆ ಎಂದು ಹೇಳಿ ನಾಮಕರಣ ಮಾಡುವ ದೃಶ್ಯವಿದೆ. ಈ ಸಿನಿಮಾದ ಮೂಲ ಕತೆಯೇ ಬೆರ್ಮೆಯ ಕುರಿತಾಗಿ. ಅಷ್ಟಕ್ಕೂ ಬೆರ್ಮೆ ಎಂದರೆ ಯಾರು? ಹಿನ್ನಲೆಯೇನು ಇಲ್ಲಿದೆ ವಿವರ.

ಕಾಂತಾರ ಮೊದಲ ಭಾಗದಲ್ಲಿ ಗುಳಿಗ ಮತ್ತು ಪಂಜುರ್ಲಿ ದೈವಗಳ ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದರು. ಈ ಮೂಲಕ ಕರಾವಳಿಯ ದೈವದ ಕತೆಗಳು ಇಡೀ ಜಗತ್ತಿಗೇ ಪರಿಚಯವಾಗಿದೆ. ಇದೀಗ ಕಾಂತಾರ ಚಾಪ್ಟರ್ 1 ರಲ್ಲಿ ಬೆರ್ಮೆಯ ಕತೆ ಹೇಳಿದ್ದಾರೆ.

ಬೆರ್ಮೆ ಎಂದರೆ ಒಂದು ವಾದದ ಪ್ರಕಾರ ತುಳುನಾಡಿನ ಸೃಷ್ಟಿಕರ್ತ. ಆತ ಎಲ್ಲಾ ದೈವಗಳಿಗೇ ರಾಜ ಎಂದು ನಂಬಲಾಗಿದೆ. ಬೆರ್ಮರಾಧನೆಗೆ ತುಳುನಾಡಿನಲ್ಲಿ ಅದರದ್ದೇ ಆದ ಗೌರವವಿದೆ. ಇಲ್ಲಿನ ಸಂಸ್ಕೃತಿಯ ಭಾಗವೇ ಆಗಿದೆ. ದಕ್ಷಿಣ ಕನ್ನಡ ಭಾಗದಲ್ಲಿ ಬೆರ್ಮೆ ದೈವವನ್ನು ಬೆರ್ಮೆರ್, ಬೊಮ್ಮೆ ಎಂಬಿತ್ಯಾದಿ ಹೆಸರಿನಿಂದ ಕರೆಯುತ್ತಾರೆ.

 ಇತರೆ ದೈವಗಳಂತೆ ಬೆರ್ಮೆ ಬಗ್ಗೆ ಬಹುತೇಕರಿಗೆ ಹೆಚ್ಚು ಗೊತ್ತಿರಲಿಕ್ಕಿಲ್ಲ. ಆದರೆ ಕಾಂತಾರ ಚಾಪ್ಟರ್ 1 ರಲ್ಲಿ ದೈವಗಳ ರಾಜ ಬೆರ್ಮೆಯ ಇತಿಹಾಸ, ಹಿನ್ನಲೆಯನ್ನು ರಿಷಬ್ ಶೆಟ್ಟಿ ತೋರಿಸಿದ್ದಾರೆ. ಈ ಮೂಲಕ ತುಳುನಾಡಿನ ಮತ್ತೊಂದು ಇತಿಹಾಸವನ್ನು ಜನರಿಗೆ ತೆರೆದಿಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಿನಿಮಾ ಬದುಕಿನಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಶ್ರೀಮುರುಳಿ

₹60ಕೋಟಿ ವಂಚನೆ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಶಿಲ್ಪಾ ಶೆಟ್ಟಿ ಪತಿ

ಲಕ್ಷ್ಮೀ ನಿವಾಸ ಧಾರವಾಹಿಯಿಂದ ಹೊರನಡೆದ ಹಿರಿಯ ನಟಿ ಅಂಜಲಿ: ಇನ್ನೊಬ್ಬ ಹಿರಿಯ ನಟಿಯೂ ಶೀಘ್ರವೇ ಔಟ್

ಮೂರು ಲಕ್ಷ ಹಣ ಕಳುವಾಯ್ತು ಎಂದು ದೂರು ಕೊಟ್ಟ ವಿಜಯಲಕ್ಷ್ಮಿಗೆ ಶಾಕ್ ನೀಡಿದ ಪೊಲೀಸರು

ಸೀತಾರಾಮ ಧಾರವಾಹಿಗೆ ಗಗನ್ ಬದಲು ಈ ನಟ ನಾಯಕನಾಗಬೇಕಿತ್ತು: ವೈಷ್ಣವಿ ಬಿಚ್ಚಿಟ್ಟ ಸತ್ಯ

ಮುಂದಿನ ಸುದ್ದಿ
Show comments