Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ತಮ್ಮ ಪುನೀತ್ ರಾಜ್ ಕುಮಾರ್ ಸಾವಿನ ನೋವು ಶಿವರಾಜ್ ಕುಮಾರ್ ರನ್ನು ಕಾಡುತ್ತಲೇ ಇದೆ. ಅದಕ್ಕೆ ಇಂದು ನಡೆದ ಪುನೀತ್ ಸ್ಮರಣ ಕಾರ್ಯಕ್ರಮ ಸಾಕ್ಷಿಯಾಯಿತು.
ನಗರದ ಈಡಿಗರ ಸಂಘದಲ್ಲಿ ಇಂದು ಆಯೋಜಿಸಿದ್ದ ಪುನೀತ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾದ ಶಿವಣ್ಣ ಅಪ್ಪು ನೆನೆದು ಗಳ ಗಳನೆ ಅತ್ತಿದ್ದಾರೆ.
ಅಪ್ಪು ಸಾವಿನ ನೋವು ನನ್ನ ಕೊನೆಯ ತನಕ ಇರುತ್ತೆ. ಅವನು ನಾವು ಹೇಗಿರ್ಬೇಕು ಎಂದು ತೋರಿಸಿಕೊಟ್ಟು ಹೋದ. ಹುಟ್ಟಿದ್ದೇ ರಾಯಲ್ ಆಗಿದ್ದೇ, ಬೆಳೆದಿದ್ದೇ ರಾಯಲ್ ಆಗಿ. ಆದರೆ ಆ ರಾಯಲ್ಟಿನ ಬೇಗನೇ ಕಿತ್ಕೊಂಡು ಬಿಟ್ಟ ದೇವರು ಎಂದು ಹೇಳುತ್ತಾ ಶಿವಣ್ಣ ಕಣ್ಣೀರು ಹಾಕಿದ್ದಾರೆ.