Publish Date: Sun, 29 Oct 2023 (07:30 IST)
Updated Date: Sun, 29 Oct 2023 (07:39 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಇಂದಿಗೆ ಎರಡು ವರ್ಷಗಳಾಗಿವೆ. ಇಂದು ಅವರ ಪುಣ್ಯಭೂಮಿಯಲ್ಲಿ ವಿಶೇಷ ಪೂಜೆ ನಡೆಯಲಿದೆ.
2021 ರ ಅಕ್ಟೋಬರ್ 29 ರಂದು ಹೃದಯಸ್ತಂಬನಕ್ಕೊಳಗಾಗಿದ್ದ ಪುನೀತ್ ದಿಡೀರ್ ಸಾವನ್ನಪ್ಪಿದ್ದರು. ಅವರ ನಿಧನ ಇಡೀ ಚಿತ್ರರಂಗಕ್ಕೇ ದೊಡ್ಡ ಶಾಕ್ ಆಗಿತ್ತು.
ಕಂಠೀರವ ಸ್ಟುಡಿಯೋದಲ್ಲಿ ಅವರ ಪುಣ್ಯ ಭೂಮಿಯಿದ್ದು, ಸದ್ಯಕ್ಕೆ ಅಲ್ಲಿ ಕುಟುಂಬಸ್ಥರು ತಾತ್ಕಾಲಿಕವಾಗಿ ಸ್ಮಾರಕ ನಿರ್ಮಾಣ ಮಾಡುತ್ತಿದೆ. ನಿನ್ನೆ ಸಂಜೆ ಕಾಮಗಾರಿ ಪೂರ್ಣಗೊಂಡಿದ್ದು ಇಂದಿನಿಂದ ಸಾರ್ವಜನಿಕರಿಗೆ ಸಮಾಧಿ ದರ್ಶನಕ್ಕೆ ಅವಕಾಶ ಸಿಗಲಿದೆ. ದೊಡ್ಮನೆ ಕುಟುಂಬದವರು ಇಂದು ಸಮಾಧಿಗೆ ಬಂದು ಪುನೀತ್ ಇಷ್ಟದ ಅಡುಗೆ ಮಾಡಿ ಪೂಜೆ ಸಲ್ಲಿಸಲಿದ್ದಾರೆ.