Select Your Language

Notifications

webdunia
webdunia
webdunia
webdunia

ಪರಿಶೀಲನೆ ನೆಪದಲ್ಲಿ ಮನೆಯಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದಾರೆ: ಕೋರ್ಟ್ ಮೊರೆ ಹೋದ ಜಗ್ಗೇಶ್

ಪರಿಶೀಲನೆ ನೆಪದಲ್ಲಿ ಮನೆಯಲ್ಲಿ ಚೆಲ್ಲಾಪಿಲ್ಲಿ ಮಾಡಿದ್ದಾರೆ: ಕೋರ್ಟ್ ಮೊರೆ ಹೋದ ಜಗ್ಗೇಶ್
ಬೆಂಗಳೂರು , ಗುರುವಾರ, 26 ಅಕ್ಟೋಬರ್ 2023 (17:08 IST)
ಬೆಂಗಳೂರು: ಹುಲಿ ಉಗುರಿನ ಲಾಕೆಟ್ ಇಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ನಟ ಜಗ್ಗೇಶ್ ಮನೆ ತಪಾಸಣೆ ನಡೆಸಿದ್ದರು.

ಆದರೆ ಅರಣ್ಯಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಜಗ್ಗೇಶ್ ಅಸಮಾಧಾನಗೊಂಡಿದ್ದು ಕೋರ್ಟ್ ಮೆಟ್ಟಿಲೇರಿದ್ದಾರೆ. ದೂರು ಬಂದ ಬೆನ್ನಲ್ಲೇ ನೋಟಿಸ್ ನೀಡಿ ಕಾಲಾವಕಾಶವನ್ನೂ ನೀಡದೇ ಮನೆಗೆ ನುಗ್ಗಿರುವುದಾಗಿ ಜಗ್ಗೇಶ್ ಆರೋಪಿಸಿದ್ದಾರೆ.

ನೋಟಿಸ್ ಗೆ ವಿವರಣೆ ನೀಡಲು 14 ದಿನಗಳ ಕಾಲಾವಕಾಶವನ್ನೂ ನೀಡದೇ ಏಕಾಏಕಿ ಮನೆಗೆ ನುಗ್ಗಿ ಮನೆಯಲ್ಲಿನ ವಸ್ತುಗಳನ್ನು ಅಸ್ತವ್ಯಸ್ತ ಮಾಡಿದ್ದಾರೆ. ಸಂದರ್ಶನದಲ್ಲಿ ಹೇಳಿದ ಮಾತನ್ನೇ ಆಧರಿಸಿ ತೇಜೋವಧೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ಕ್ರಮವನ್ನು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಜಗ್ಗೇಶ್ ತಮ್ಮ ವಕೀಲರ ಮೂಲಕ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಲಿ ಉಗುರಿನ ಲಾಕೆಟ್ ಹುಡುಕಿ ಹೋದ ಅಧಿಕಾರಿಗಳಿಗೆ ದರ್ಶನ್ ಮನೆಯಲ್ಲಿ ಸಿಕ್ಕಿದ್ದೇನು?