Select Your Language

Notifications

webdunia
webdunia
webdunia
webdunia

ಅಪಘಾತದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಹಾಕಿದ ನಾಗಭೂಷಣ್

ಅಪಘಾತದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಹಾಕಿದ ನಾಗಭೂಷಣ್
ಬೆಂಗಳೂರು , ಸೋಮವಾರ, 9 ಅಕ್ಟೋಬರ್ 2023 (19:25 IST)
ಬೆಂಗಳೂರು: ಇತ್ತೀಚೆಗೆ ಕೋಣನಕುಂಟೆ ಕ್ರಾಸ್ ಬಳಿ ನಟ ನಾಗಭೂಷಣ್ ಕಾರು ಅಪಘಾತಕ್ಕೀಡಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದರು.  ಆ ಪ್ರಕರಣದ ಬಗ್ಗೆ ಮಾತನಾಡಲು ಇದೇ ಮೊದಲ ಬಾರಿಗೆ ನಾಗಭೂಷಣ್ ಮಾಧ್ಯಮಗಳ ಮುಂದೆ ಬಂದಿದ್ದಾರೆ.

ನಾಗಭೂಷಣ್ ಕಾರು ಅಪಘಾತವಾದ ಬಳಿಕ ನಡೆದಿದ್ದೇನು, ಏನೆಲ್ಲಾ ಆಗಿದೆ ಎಂಬಿತ್ಯಾದಿ ವಿವರಗಳನ್ನು ನೀಡಿದ್ದಾರೆ. ಜೊತೆಗೆ ಘಟನೆಯಿಂದ ಮಾನಸಿಕವಾಗಿ ಕುಗ್ಗಿರುವುದಾಗಿ ಹೇಳಿದ್ದು, ಕಣ್ಣೀರು ಹಾಕಿದ್ದಾರೆ.

‘ಆ ಘಟನೆ ಬಳಿಕ ನಾನೂ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಹೀಗಾಗಿ ತಕ್ಷಣಕ್ಕೆ ನಿಮ್ಮ ಮುಂದೆ ಬರಲಿಲ್ಲ. ಘಟನೆ ನಡೆದಾಗ ನಾನೇ ಆ ಮಹಿಳೆಯನ್ನು ಕಾಪಾಡಬೇಕೆಂದು ಆಟೋದಲ್ಲಿ ಕೂರಿಸಿ ಆಸ್ಪತ್ರೆಗೆ ಸೇರಿಸಿದ್ದೆ. ನಾನು ಸ್ಥಳದಿಂದ ಓಡಿ ಹೋಗಿರಲಿಲ್ಲ. ನಾನೇ ಪೊಲೀಸರಿಗೆ ವಿಷಯ ತಿಳಿಸಿದ್ದೆ. ಇದುವರೆಗೂ ಎಲ್ಲದಕ್ಕೂ ಸಹಕಾರ ನೀಡಿದ್ದೇನೆ. ಮುಂದೆಯೂ ಆ  ಕುಟುಂಬಕ್ಕೆ ನನ್ನಿಂದೇ ಏನು ಮಾಡಬಹುದು ಮಾಡಲು ಸಿದ್ಧನಿದ್ದೇನೆ. ಘಟನೆ ಬಗ್ಗೆ ನನಗೂ ದುಃಖವಿದೆ. ದಯವಿಟ್ಟು ನನ್ನನ್ನು ಓಡಿ ಹೋಗಿದ್ದೇನೆ ಎಂದೆಲ್ಲಾ ಬಿಂಬಿಸಬೇಡಿ. ನಾನು ಚಿಕ್ಕವಯಸ್ಸಿನಲ್ಲೇ ಆಕ್ಸಿಡೆಂಟ್ ನಲ್ಲಿ ತಂದೆಯನ್ನು ಕಳೆದುಕೊಂಡಿದ್ದೆ. ಹೀಗಾಗಿ ಅವರ ನೋವು ಏನೆಂದು ನನಗೂ ಗೊತ್ತು. ಆದರೆ ಬೇಕೆಂದೇ ಮಾಡಿದ್ದಲ್ಲ. ನನ್ನಿಂದ ಹೀಗಾಗಬಹುದು ಎಂದು ನನಗೂ ಊಹೆಯೇ ಇರಲಿಲ್ಲ’ ಎಂದು ವಿವರಣೆ ನೀಡುತ್ತಾ ಕಣ್ಣೀರು ಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ 10 ಕ್ಕೆ ಚಾರ್ಲಿ ಬರಲೇ ಇಲ್ಲ ಯಾಕೆ?