Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರರಂಗ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದೆ: ಕಿಚ್ಚ ಸುದೀಪ್ ಬೇಸರ

Kiccha Sudeep

Krishnaveni K

ಬೆಂಗಳೂರು , ಶನಿವಾರ, 21 ಸೆಪ್ಟಂಬರ್ 2024 (10:00 IST)
ಬೆಂಗಳೂರು: ಕನ್ನಡ ಚಿತ್ರರಂಗ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ತಾರೆಯರ ಬ್ಯಾಡ್ಮಿಂಟನ್ ಕಪ್ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಯಾಕೋ ಕನ್ನಡ ಚಿತ್ರರಗ ಕೆಟ್ಟ ಕಾರಣಗಳಿಂದಲೇ ಸುದ್ದಿಯಾಗುತ್ತಿದೆ. ಅದರ ನಡುವೆ ಇದು ಸಂತೋಷದ ಕ್ಷಣ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇಂತಹದ್ದೊಂದು ಕಾರ್ಯಕ್ರಮ ಕನ್ನಡ ಚಿತ್ರರಂಗದ ಬಗ್ಗೆ ಉತ್ತಮ ಸಂದೇಶ ಕೊಡುತ್ತದೆ. ಯಾರು ಏನೇ ಹೇಳಿದರೂ ಕನ್ನಡ ಚಿತ್ರರಂಗದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಕಿಚ್ಚ ಹೇಳಿದ್ದಾರೆ.

ಕನ್ನಡ ಚಲನಚಿತ್ರ ಕಲಾವಿದರು, ಕಿರುತೆರೆ ಕಲಾವಿದರು, ತಂತ್ರಜ್ಞರು ಮತ್ತು ಮಾಧ್ಯಮದವರು ಒಟ್ಟಾಗಿ ಪಾಲ್ಗೊಳ್ಳುವ ಬ್ಯಾಡ್ಮಿಂಟನ್ ಕಪ್ ಟೂರ್ನಿಗೆ ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಮುಖ್ಯ ಅತಿಥಿಯಾಗಿದ್ದರು. ಒಂದೆಡೆ ಮೀಟೂ ಸಮಿತಿ ವಿವಾದ ಇನ್ನೊಂದೆಡೆ ದರ್ಶನ್ ಅರೆಸ್ಟ್ ವಿಚಾರ ಇತ್ಯಾದಿಗಳು ಇತ್ತೀಚೆಗೆ ಕನ್ನಡ ಚಿತ್ರರಂಗವನ್ನು ಕಾಡುತ್ತಲೇ ಇದೆ.

ಇನ್ನು ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮೀಟೂ ವಿವಾದ ವಿಚಾರವಾಗಿ ಸಮಿತಿ ರಚನೆ ಮಾಡಬೇಕು ಎಂದು ಮನವಿ ಮಾಡಿದವರಲ್ಲಿ ಶ್ರುತಿ ಹರಿಹರನ್ ಕೂಡಾ ಒಬ್ಬರು. ಈ ಕಾರ್ಯಕ್ರಮಕ್ಕೆ ಅವರೂ ಬಂದಿದ್ದರು. ಅವರ ಮುಂದೆಯೇ ಸುದೀಪ್ ಸಾ ರಾ ಗೋವಿಂದು ಅವರನ್ನು ತಬ್ಬಿ ನಾನೂ ನಿಮ್ಮ ಮೀ ಟೂನಲ್ಲಿದ್ದೇನೆ ಸರ್ ಎಂದು ತಮಾಷೆ ಮಾಡಿದ್ದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಡಕ್ಕೆ ಕೆಲಸ ಇಲ್ಲ, ದರ್ಶನ್ ನದ್ದು ಒಂದೇ ಸುದ್ದೀನಾ: ಗುರುಕಿರಣ್