Webdunia - Bharat's app for daily news and videos

Install App

ಸುದೀಪ್ ವಿವಾದ: ಸೂರಪ್ಪ ಬಾಬು ವಿರುದ್ಧ ಚಕ್ರವರ್ತಿ ಚಂದ್ರಚೂಡ್ ಏಕವಚನದಲ್ಲಿ ವಾಗ್ದಾಳಿ

Webdunia
ಸೋಮವಾರ, 24 ಜುಲೈ 2023 (17:11 IST)
ಬೆಂಗಳೂರು: ಕಿಚ್ಚ ಸುದೀಪ್-ಎಂಎನ್ ಕುಮಾರ್ ನಡುವಿನ ವಿವಾದಕ್ಕೆ ನಾಂದಿ ಹಾಡಿದ್ದು ನಿರ್ಮಾಪಕ ಸೂರಪ್ಪ ಬಾಬು ಎಂಬ ಚಕ್ರವರ್ತಿ ಚಂದ್ರಚೂಡ್ ಆರೋಪಕ್ಕೆ ನಿನ್ನೆ ಸೂರಪ್ಪ ಬಾಬು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಈಗ ಚಂದ್ರಚೂಡ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಕುಮ್ಮಕ್ಕಿನಿಂದಲೇ ನಿರ್ಮಾಪಕ ಎಂಎನ್ ಕುಮಾರ್ ಆರೋಪ ಹೊರಿಸಿದ್ದರು ಎಂದು ಚಕ್ರವರ್ತಿ ಚಂದ್ರಚೂಡ್ ಯೂ ಟ್ಯೂಬ್ ವಾಹಿನಿಯಲ್ಲಿ ಆರೋಪಿಸಿದ್ದರು. ಸುದೀಪ್ ಆಪ್ತರಾಗಿರುವ ಚಂದ್ರಚೂಡ್ ಆರೋಪದಿಂದ ಕೆರಳಿದ್ದ ಸೂರಪ್ಪಬಾಬು ನಿನ್ನೆ ಮಾಧ್ಯಮಗೋಷ್ಠಿಯಲ್ಲಿ ನನ್ನ ಸುದೀಪ್ ನಡುವೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಚಂದ್ರಚೂಡ್ ವಿರುದ್ಧ ಕಿಡಿ ಕಾರಿದ್ದರು.

ಇದರ ಬೆನ್ನಲ್ಲೇ ಇಂದು ಚಂದ್ರಚೂಡ್ ಸೂರಪ್ಪ ಬಾಬು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿ ಕರೆದು ಸೂರಪ್ಪಬಾಬು ವಿರುದ್ಧ ವಾಗ್ದಾಳಿ ನಡೆಸಿರುವ ಚಂದ್ರಚೂಡ್ ‘ಹೆಂಡತಿ ಮಕ್ಕಳು ಇದ್ರೆ ಗಂಡಸ್ತನ ಬರುವುದಿಲ್ಲ, ಗಂಡಸಿನ ರೀತಿ ಬದುಕಬೇಕು’ ಎಂದಿದ್ದಾರೆ.  ಈ ಪ್ರಕರಣ ಕೊನೆಗೊಳ್ಳಬಾರದು ಎಂಬುದು ಸೂರಪ್ಪಬಾಬು ಉದ್ದೇಶ. ಅವರ ಪತ್ರಿಕಾಗೋಷ್ಠಿಗೆ ಕುಮಾರ್ ಮಗನನ್ನು ಏಕೆ ಕರೆಯಬೇಕಿತ್ತು? ನನ್ನ ಅಣ್ಣ ಸುದೀಪ್ ವಿಷಯಕ್ಕೆ ಬಂದರೆ ಸುಮ್ಮನಿರಲ್ಲ. ಈಗ ಸಮಸ್ಯೆ ಬಗೆಹರಿಯುತ್ತಿದೆ ಎಂದಾಗ ಅದನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ಸೂರಪ್ಪ ಬಾಬು ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಪತ್ರಕರ್ತರಿಗೆ ಆಮಿಷವೊಡ್ಡಿದ್ದಾರೆ. ಅದರ ದಾಖಲೆಗಳನ್ನು ಕೊಡುತ್ತೇನೆ. ಸೂರಪ್ಪ ಬಾಬು ನಿನಗೆ ನಾನು ಗೌರವ ಕೊಡುತ್ತೇನೆ. ನಾನು ನಿನಗೆ ಕೆಲಸ ಕೊಡುತ್ತೇನೆ. ನನಗೆ ಸೆಕ್ಯುರಿಟಿ ಗಾರ್ಡ್ ಬೇಕು. ಬಾ ನಾನು ನಿನಗೆ ಕೆಲಸ ಕೊಡುತ್ತೇನೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Gold Smuggling Case:ಭಾರೀ ಷರತ್ತಿನೊಂದಿಗೆ ರನ್ಯಾ ರಾವ್‌ಗೆ ಸಿಕ್ತು ಜಾಮೀನು

ಈಚೆಗೆ ಆರೋಗ್ಯ ವಿಚಾರಕ್ಕೆ ಸುದ್ದಿಯಾಗಿದ್ದ ನಟ ವಿಶಾಲ್‌ಗೆ ಕೂಡಿ ಬಂತು ಕಂಕಣಭಾಗ್ಯ

Actor Darshan, ಪತ್ನಿ ಜತೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು ಖುಷಿಯಲ್ಲಿದ್ದ ದರ್ಶನ್‌ಗೆ ದುಃಖದ ನ್ಯೂಸ್‌

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

Darshan Pavithra Gowda: ದರ್ಶನ್ ಜೊತೆ ಮತ್ತೆ ಪವಿತ್ರಾ ಗೌಡ: ನಾ ನಿನ್ನ ಬಿಡಲಾರೆ ಪಾರ್ಟ್ 2 ನಾ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments