Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಚೆನ್ನೈ: ಐಪಿಎಲ್ 11 ನೇ ಆವೃತ್ತಿ ಆರಂಭವಾದ ಮೇಲೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಂದಿಲ್ಲೊಂದು ಶಾಕಿಂಗ್ ನ್ಯೂಸ್ ಕೇಳಿಕೊಂಡೇ ಬರುತ್ತಿದೆ.
ಮೊದಲ ಪಂದ್ಯ ಮುಗಿದ ಬೆನ್ನಲ್ಲೇ ಗಾಯದಿಂದಾಗಿ ಕೇದಾರ್ ಜಾದವ್ ಐಪಿಎಲ್ ನಿಂದ ಔಟ್ ಆದ ಸುದ್ದಿ ಬಂದಿತ್ತು. ಇದೀಗ ಧೋನಿ ಬಲಗೈ ಬಂಟ ಸುರೇಶ್ ರೈನಾ ಸರದಿ.
ರೈನಾ ಕೂಡಾ ಮಂಡಿ ನೋವಿಗೆ ತುತ್ತಾಗಿದ್ದು, ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಹೀಗಾಗಿ ಚೆನ್ನೈ ತಂಡ ಪ್ರಮುಖ ಬ್ಯಾಟ್ಸ್ ಮನ್ ಸೇವೆಯಿಂದ ವಂಚಿತವಾಗಲಿದೆ. ಹಾಗಿದ್ದರೂ ಚೆನ್ನೈ ತಂಡದಲ್ಲಿ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಮರ್ಥರಿದ್ದಾರೆ. ಈಗಾಗಲೇ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.