Publish Date: Tue, 13 Oct 2020 (10:22 IST)
Updated Date: Tue, 13 Oct 2020 (10:23 IST)
ದುಬೈ: ಆರ್ ಸಿಬಿ ಗೆಲುವಿಗೆ ಮುನ್ನುಡಿ ಬರೆದ ಸ್ಪೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಬ್ಯಾಟಿಂಗ್ ಶೈಲಿಯನ್ನು ಎದುರಾಳಿ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಭರಪೂರ ಹೊಗಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿರುವ ದಿನೇಶ್ ಕಾರ್ತಿಕ್ ‘ತಾನು ಯಾಕೆ ಶ್ರೇಷ್ಠ ಆಟಗಾರ ಎಂಬುದನ್ನು ಎಬಿಡಿ ತೋರಿಸಿಕೊಟ್ಟಿದ್ದಾರೆ. ಬ್ಯಾಟಿಂಗ್ ಸುಲಭವಾಗಿರಲಿಲ್ಲ. ಹಾಗಿದ್ದರೂ ಅವರು ಅದನ್ನು ಸುಲಭವೆಂಬಂತೆ ಮಾಡಿ ತೋರಿಸಿದರು. ಕೊನೆಯ ಹಂತದಲ್ಲಿ ಬ್ಯಾಟಿಂಗ್ ಮಾಡಿ 80 ರನ್ ಗಳಿಸುವುದೆಂದರೆ ಸುಲಭದ ಮಾತಲ್ಲ’ ಎಂದು ಎಬಿಡಿಯನ್ನು ಕೊಂಡಾಡಿದ್ದಾರೆ.