Publish Date: Thu, 11 Apr 2019 (13:55 IST)
Updated Date: Thu, 11 Apr 2019 (13:57 IST)
ದೇಶದಲ್ಲಿ ಅದರಲ್ಲಿಯೂ ನಮ್ಮ ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಮುಖಂಡರ ಹಾಗೂ ಅವರ ಬೆಂಬಲಿಗರ ಮೇಲೆ ಐಟಿ ನಡೆಯುತ್ತಿದೆ. ಇದಕ್ಕೆ ಕಾರಣ ಯಾರು ಅಂತ ಇವರು ಹೇಳಿದ್ದಾರೆ.
ದೇಶಕ್ಕೆ ಒಬ್ಬ ನಿರ್ಣಾಯಕ ವ್ಯಕ್ತಿ ಬೇಕು. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಯಾಗಬೇಕು. ಮೋದಿ ಮತ್ತೊಮ್ಮ ಎಂಬುದು ಶ್ರೀಸಾಮಾನ್ಯನ ಕೂಗಾಗಿದೆ. ಹೀಗಂತ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.
ಬಡವರ ಆರೋಗ್ಯ ದೃಷ್ಟಿಯಿಂದ ಔಷಧಗಳನ್ನು ನೀಡುವ ದೃಷ್ಟಿಯಿಂದ ಜನೌಷಧ ಕೇಂದ್ರಗಳನ್ನು ತೆರೆದಿದ್ದಾರೆ. ಐ ಟಿ ರೈಡ್ ಮಾಡುತ್ತಿರುವುದು ಇಲಾಖೆಯಷ್ಟೇ ಹೊರತು ಮೋದಿಯವರಲ್ಲ ಅಂತ ಹೇಳಿದ್ದಾರೆ.
ಸಂವಿಧಾನ ನಿರ್ಮಾಣ ಮಾಡಿದವರು ಮಾಹಾನ್ ಮೇಧಾವಿಗಳು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಕಳೆದ ಐದು ವರ್ಷದಿಂದ ಭಾರತ ಎಷ್ಟು ಅಭಿವೃದ್ಧಿ ಹೊಂದಿದೆಯೋ ಅದೇ ರೀತಿ ದೇಶದ ಆಶೋತ್ತರಗಳನ್ನು ಈಡೇರಿಸುವ ದೃಷ್ಟಿಯಿಂದ ಮತ್ತೊಮ್ಮ ಬಿಜೆಪಿಗೆ ಸಹಕರಿಸಿ ಎಂದರು.