Publish Date: Sun, 21 Apr 2019 (15:04 IST)
Updated Date: Sun, 21 Apr 2019 (15:07 IST)
ಲೋಕಸಭಾ ಚುನಾವಣೆ ಪ್ರಚಾರಕ್ಕೆ ಇಂದು ಕೊನೆ ದಿನವಾಗಿರುವ ಹಿನ್ನೆಲೆಯಲ್ಲಿ ಖರ್ಗೆ ವಿರುದ್ಧ ಬಿಜೆಪಿ ರ್ಯಾಲಿ ನಡೆಸಿತು.
ಕಲಬುರಗಿಯಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿರುವ ಹಿನ್ನೆಲೆಯಲ್ಲಿ, ಕಲಬುರ್ಗಿಯಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳಿಂದ ಭರ್ಜರಿ ಮತ ಬೇಟೆ ನಡೆಯಿತು.
ಒಂದು ಕಡೆ ಮಲ್ಲಿಕಾರ್ಜುನ ಖರ್ಗೆ ಬಹಿರಂಗ ಪ್ರಚಾರ ಸಭೆಗಳ ಮೂಲಕ ಮತಯಾಚನೆ ಮಾಡಿದ್ರು. ಇನ್ನೊಂದು ಕಡೆ ಬಿಜೆಪಿಯಂದ ಭರ್ಜರಿ ರೋಡ್ ಶೋ ನಡೆಯಿತು.
ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನದಿಂದ ರೋಡ್ ಶೋ ಬಿಜೆಪಿ ನಡೆಸಿದ್ದು, ಬಿಜೆಪಿ ಅಭ್ಯರ್ಥಿ ಉಮೇಶ ಜಾಧವರ್ ಮತ್ತು ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ.