Publish Date: Fri, 20 Aug 2021 (11:26 IST)
Updated Date: Fri, 20 Aug 2021 (09:33 IST)
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಸದಸ್ಯರನ್ನು ಯಾರೇ ಕೆಣಕಿದರೂ ಸುಮ್ಮನಿರುವ ಮನುಷ್ಯನೇ ಅಲ್ಲ ಎಂದು ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪಣೇಸರ್ ಹೇಳಿದ್ದಾರೆ.
ತಮ್ಮ ಸಹ ಕ್ರಿಕೆಟಿಗರಿಗೆ ಯಾರಾದರೂ ಏನಾದರೂ ಹೇಳಿದರೆ ಅವರು ಸಹಿಸಲ್ಲ. ಎರಡನೇ ಟೆಸ್ಟ್ ಪಂದ್ಯದಲ್ಲೂ ಇದೇ ನಡೆದಿರುವುದು ಎಂದು ಪಣೇಸರ್ ಹೇಳಿದ್ದಾರೆ.
ಬಹುಶಃ ಇಂಗ್ಲೆಂಡ್ ಮ್ಯಾನೇಜ್ ಮೆಂಟ್ ಟೀಂ ಇಂಡಿಯಾ 10-11 ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಳಿಗೆ ಬೌನ್ಸರ್ ಹಾಕಿ ಕೆಣಕುವ ಪ್ರಯತ್ನ ನಡೆಸಿದರು. ಆದರೆ ಇದನ್ನೇ ಅವರು ಲಾಭಕ್ಕೆ ಬಳಸಿಕೊಂಡರು. ಇಡೀ ತಂಡವೇ ಇಂಗ್ಲೆಂಡ್ ವಿರುದ್ಧ ತಿರುಗಿಬಿತ್ತು ಎಂದು ಪಣೇಸರ್ ಹೇಳಿದ್ದಾರೆ.