Publish Date: Thu, 19 Aug 2021 (12:07 IST)
Updated Date: Thu, 19 Aug 2021 (09:09 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಬೌಲಿಂಗ್ ವಿಭಾಗದಲ್ಲಿ ಮಿಂಚುತ್ತಿರುವ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಆಕ್ರಮಣಕಾರಿ ಧೋರಣೆಯಿಂದ ಸುದ್ದಿಯಾಗುತ್ತಿದ್ದಾರೆ.
ಮೈದಾನದಲ್ಲಿ ಪ್ರದರ್ಶನದ ಜೊತೆಗೆ ಎದುರಾಳಿಗಳು ಕೆಣಕಿದರೆ ಪ್ರತ್ಯುತ್ತರ ನೀಡುವ ವಿಚಾರದಲ್ಲೂ ಅವರು ಕೊಹ್ಲಿಯನ್ನೂ ಮೀರಿದ ಆಕ್ರಮಣಕಾರಿ ಮನೋಭಾವ ತೋರುತ್ತಿದ್ದಾರೆ.
ಸದ್ಯಕ್ಕೆ ಇವರಂತಹ ಆಕ್ರಮಣಕಾರಿ ಬೌಲರ್ ಟೀಂ ಇಂಡಿಯಾದಲ್ಲಿ ಮತ್ತೊಬ್ಬರಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ವೇಗಿಗೆ ಇಂತಹ ಧೋರಣೆ ಇದ್ದರೇ ಆಟವೂ ಸಖತ್ ಆಗಿರುತ್ತದೆ. ಹೀಗಾಗಿಯೇ ಮೊಹಮ್ಮದ್ ಸಿರಾಜ್ ಈಗ ಎಲ್ಲರ ಕಣ್ಮಣಿಯಾಗಿದ್ದಾರೆ.