Publish Date: Sun, 09 Aug 2020 (09:52 IST)
Updated Date: Sun, 09 Aug 2020 (09:53 IST)
ಮುಂಬೈ: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ಮೇಲೆ ಮಾಡಿದ ತಪ್ಪಿಗೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಕ್ಷಮೆ ಯಾಚಿಸಿದ್ದಾರೆ.
2005 ರಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಧೋನಿ ತಮ್ಮ ಬೌಲಿಂಗ್ ನಲ್ಲಿ ಸತತವಾಗಿ ಬೌಂಡರಿ ಗಳಿಸಿದ್ದರು. ಅದೇ ಸಿಟ್ಟಿನಲ್ಲಿ ಬೇಕೆಂದೇ ಧೋನಿಗೆ ಬೀಮರ್ ಎಸೆದು ವಿಚಲಿತರನ್ನಾಗಿ ಮಾಡಲು ಪ್ರಯತ್ನಿಸಿದರಂತೆ. ತಕ್ಷಣವೇ ಧೋನಿ ಬಳಿ ಕ್ಷಮೆಯನ್ನೂ ಯಾಚಿಸಿದ್ದರಂತೆ.
ಆ ಘಟನೆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಖ್ತರ್ ಅಂದು ನಾನು ಧೋನಿಗೆ ಹಾಗೆ ಮಾಡಬಾರದಿತ್ತು ಎಂದು ಪಶ್ಚಾತ್ತಾಪಪಟ್ಟಿದ್ದಾರೆ.