Publish Date: Thu, 05 Sep 2019 (09:35 IST)
Updated Date: Thu, 05 Sep 2019 (09:37 IST)
ಮುಂಬೈ: ನಮ್ಮಂತಹ ಸಣ್ಣ ರಾಜ್ಯಗಳ ಆಟಗಾರರು ನಿಮಗೆ ಕಾಣಿಸಲ್ವೇ? ರಣಜಿ ಟ್ರೋಫಿಯಲ್ಲಿ ಫೈನಲ್ ವರೆಗೆ ಆಡಿದರೂ ಆ ಪರ್ಫಾಮೆನ್ಸ್ ಆಧಾರದಲ್ಲಿ ಅವಕಾಶ ಕೊಡಲ್ಲ ಯಾಕೆ? ಹೀಗಂತ ಸೌರಾಷ್ಟ್ರ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಶೆಲ್ಡನ್ ಜ್ಯಾಕ್ಸನ್ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ವಿರುದ್ಧ ಹರಿಹಾಯ್ದಿರುವ ಶೆಲ್ಡನ್ ಟೀಂ ಇಂಡಿಯಾಗೆ ಅವಕಾಶ ಪಡೆಯಲು ರಣಜಿ ಟ್ರೋಫಿಯಂತಹ ಪಂದ್ಯಗಳು ಮಾನದಂಡವಾಗುವುದಿಲ್ಲ ಎಂದಾದರೆ ಅಂತಹ ಟೂರ್ನಿ ಆಡಿಸುವುದೇಕೆ? ಎಂದು ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಧೋನಿಯಿಂತ ತೆರವಾದ ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಗೆ ಮಣೆ ಹಾಕಲಾಗಿದೆ. ಅಷ್ಟೇ ಅಲ್ಲದೆ, ಟೀಂ ಇಂಡಿಯಾಗೆ ಯುವ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದ್ದರೂ ಸೌರಾಷ್ಟ್ರ ತಂಡವನ್ನು ಕಡೆಗಣಿಸಲಾಗುತ್ತಿದೆ. ರಣಜಿ ಟ್ರೋಫಿ ಫೈನಲ್ ವರೆಗೆ ಆಡಿದ ತಂಡವಾಗಿದ್ದರೂ ಸೌರಾಷ್ಟ್ರದ ಯಾವ ಆಟಗಾರನಿಗೂ ಟೀಂ ಇಂಡಿಯಾದಲ್ಲಿ ಅವಕಾಶವಿಲ್ಲ. ಕೇವಲ ಭಾರತ ಎ ತಂಡದಲ್ಲಿ ಅವಕಾಶ ನೀಡಲಾಗುತ್ತಿದೆ ಎಂದು ಶೆಲ್ಡನ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ತಾರತಮ್ಯ ಪ್ರಶ್ನಿಸಿದ್ದಾರೆ.