Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೊಲೊಂಬೋ: ಭಾರತದ ವಿರುದ್ಧ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿ ಆಡಲಿರುವ ಶ್ರೀಲಂಕಾ ಕ್ರಿಕೆಟಿಗರಲ್ಲಿ ಕೊರೋನಾ ಆತಂಕ ಮನೆ ಮಾಡಿದೆ. ಇದರಿಂದಾಗಿ ಸರಣಿಯೇ ಕೆಲವು ದಿನ ಮುಂದೂಡಿಕೆಯಾಗಿದೆ.
ಈ ನಡುವೆ ಸೋಮವಾರ ಆರ್ ಟಿಪಿಸಿ ಆರ್ ವರದಿಯಲ್ಲಿ ನೆಗೆಟಿವ್ ವರದಿ ಬಂದ ಆಟಗಾರರು ಜೈವ ಸುರಕ್ಷಾ ವಲಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು, ಕೋಚ್ ಗ್ರಾಂಟ್ ಫ್ಲವರ್, ವಿಡಿಯೋ ವಿಶ್ಲೇಷಕ ನಿರೋಶನ್ ಸೇರಿದಂತೆ ಸೋಂಕಿತರಾಗಿರುವ ಕ್ರಿಕೆಟಿಗರು ಪ್ರತ್ಯೇಕ ಕ್ವಾರಂಟೈನ್ ನಲ್ಲಿದ್ದಾರೆ. ಇವೆರೆಲ್ಲರೂ ನೆಗೆಟಿವ್ ವರದಿ ಬಂದ ಬಳಿಕವಷ್ಟೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರೂ ಸುರಕ್ಷತಾ ಕಾರಣಗಳಿಗೆ ತಮ್ಮ ಹೋಟೆಲ್ ಕೊಠಡಿಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ.