Publish Date: Tue, 07 Aug 2018 (09:34 IST)
Updated Date: Tue, 07 Aug 2018 (09:36 IST)
ಕೋಲ್ಕೊತ್ತಾ: ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿರುವ ಟೀಂ ಇಂಡಿಯಾಗೆ ಮಾಜಿ ನಾಯಕ ಸೌರವ್ ಗಂಗೂಲಿ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಸೋತ ಮಾತ್ರಕ್ಕೆ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡದ ಆಟಗಾರರಲ್ಲಿ ಬದಲಾವಣೆ ಮಾಡುವುದು ಅಥವಾ ಪ್ರಯೋಗ ಮಾಡಲು ಹೋಗಬೇಡಿ ಎಂದು ನಾಯಕ ವಿರಾಟ್ ಕೊಹ್ಲಿಗೆ ಗಂಗೂಲಿ ಸಲಹೆ ನೀಡಿದ್ದಾರೆ.
ಟೆಸ್ಟ್ ಸ್ಪೆಷಲಿಸ್ಟ್ ಮುರಳಿ ವಿಜಯ್, ಅಜಿಂಕ್ಯಾ ರೆಹಾನೆ ಇನ್ನಷ್ಟು ಏಕಾಗ್ರತೆಯಿಂದ ಬ್ಯಾಟಿಂಗ್ ನಡೆಸಬೇಕು ಎಂದಿರುವ ಗಂಗೂಲಿ ಮುಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡದೇ ಇದೇ ತಂಡವೇ ಉತ್ತಮವಾಗಿ ಪ್ರದರ್ಶನ ತೋರಲು ಅಗತ್ಯ ತಯಾರಿ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
Krishnaveni K
Publish Date: Tue, 07 Aug 2018 (09:34 IST)
Updated Date: Tue, 07 Aug 2018 (09:36 IST)