Publish Date: Fri, 30 Sep 2022 (08:10 IST)
Updated Date: Fri, 30 Sep 2022 (08:38 IST)
ಮುಂಬೈ: ಪ್ರಸಕ್ತ ನಡೆಯುತ್ತಿರುವ ದ.ಆಫ್ರಿಕಾ ಟಿ20 ಸರಣಿ, ಮುಂಬರುವ ಟಿ20 ವಿಶ್ವಕಪ್ ನಿಂದ ಸಂಜು ಸ್ಯಾಮ್ಸನ್ ರನ್ನು ಹೊರಗಿಟ್ಟಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದೆ.
ಸಂಜು ತವರು ತಿರುವನಂತಪುರಂನಲ್ಲಿ ನಡೆದ ಪಂದ್ಯದ ವೇಳೆ ಅಭಿಮಾನಿಗಳ ಅವರ ಕಟೌಟ್ ಹಾಕಿ ಪ್ರೇಮ ವ್ಯಕ್ತಪಡಿಸಿದ್ದರು. ಇದೀಗ ಅಭಿಮಾನಿಗಳಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಭರವಸೆಯೊಂದನ್ನು ನೀಡಿದ್ದಾರೆ.
ಸಂಜು ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. ಸಂಜು ಮುಂಬರುವ ದ.ಆಫ್ರಿಕಾ ವಿರುದ್ಧದ ಏಕದಿನ ತಂಡದ ಭಾಗವಾಗಿರಲಿದ್ದಾರೆ. ಅಲ್ಲದೆ, ಅವರು ಐಪಿಎಲ್ ನಲ್ಲಿ ಒಂದು ಫ್ರಾಂಚೈಸಿಯ ನಾಯಕರಾಗಿ ಉತ್ತಮ ನಿರ್ವಹಣೆ ತೋರಿದ್ದಾರೆ. ಹೀಗಾಗಿ ಖಂಡಿತವಾಗಿಯೂ ಅವರು ಭಾರತ ತಂಡದ ಭಾಗವಾಗಿದ್ದಾರೆ ಎಂದಿದ್ದಾರೆ ಗಂಗೂಲಿ.