Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಭುಜದ ಗಾಯದಿಂದಾಗಿ ಕ್ರಿಕೆಟ್ ನಿಂದ ಬ್ರೇಕ್ ಪಡೆದಿರುವ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶ್ರೇಯಸ್ ಐಯರ್ ಮತ್ತೆ ತಂಡ ಕೂಡಿಕೊಳ್ಳಲು ತಯಾರಿ ನಡೆಸಿದ್ದಾರೆ.
ಮುಂಬರುವ ವಿಶ್ವಕಪ್ ಟಿ20 ಟೂರ್ನಿಯ ವೇಳೆಗೆ ಮರಳಿ ತಂಡಕ್ಕೆ ಸೇರ್ಪಡೆಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಶ್ರೇಯಸ್ ಟಿ20 ವಿಶ್ವಕಪ್ ನಲ್ಲಿ ತಂಡ ಪ್ರತಿನಿಧಿಸಿ ಗೆಲುವು ದೊರಕಿಸಿಕೊಡಲು ಏನು ಮಾಡಲು ಬೇಕಾದರೂ ರೆಡಿ ಎಂದಿದ್ದಾರೆ.
ಭುಜದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಶ್ರೇಯಸ್ ಐಪಿಎಲ್ 14 ರ ಮೊದಲ ಭಾಗದಲ್ಲೂ ಆಡಿರಲಿಲ್ಲ. ಸದ್ಯಕ್ಕೆ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶ್ರೇಯಸ್ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ.