Publish Date: Wed, 10 Oct 2018 (08:05 IST)
Updated Date: Wed, 10 Oct 2018 (08:07 IST)
ಮುಂಬೈ: ಪ್ರಸಕ್ತಿ ಬಿಸಿಸಿಐ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಗೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ನಿರ್ಧಾರಗಳನ್ನು ಪ್ರಶ್ನಿಸುವ ಧೈರ್ಯವೇ ಇಲ್ಲ ಎಂದು ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ಟೀಕಿಸಿದ್ದಾರೆ.
ಅವಕಾಶ ಕೊಡದೇ ಕರುಣ್ ನಾಯರ್ ಮತ್ತು ಮುರಳಿ ವಿಜಯ್ ರನ್ನು ತಂಡದಿಂದ ಕೈಬಿಟ್ಟಿದ್ದರ ಬಗ್ಗೆ ಉಲ್ಲೇಖಿಸಿ ಕಿರ್ಮಾನಿ ಈ ರೀತಿ ವಾಗ್ದಾಳಿ ನಡೆಸಿದ್ದಾರೆ.
‘ಈಗಿನ ಆಯ್ಕೆ ಸಮಿತಿಗೆ ಕೊಹ್ಲಿ, ರವಿಶಾಸ್ತ್ರಿ ನಿರ್ಧಾರವನ್ನು ಪ್ರಶ್ನಿಸುವ ಅನುಭವ ಇಲ್ಲ. ಅವರು ತಂಡದ ಮ್ಯಾನೇಜ್ ಮೆಂಟ್ ಹೇಳಿದ್ದನ್ನೇ ನಂಬುತ್ತಿವೆ. ಯಾಕೆಂದರೆ ಅವರಿಗೆ ಅವರನ್ನು ಪ್ರಶ್ನಿಸುವಷ್ಟು ಅನುಭವವಿಲ್ಲ’ ಎಂದು ಕಾರ್ಯಕ್ರಮವೊಂದರಲ್ಲಿ ಕಿರ್ಮಾನಿ ಟಾಂಗ್ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.