Publish Date: Sun, 27 Feb 2022 (17:24 IST)
Updated Date: Sun, 27 Feb 2022 (17:25 IST)
ಚೆನ್ನೈ: ಜಮ್ಮು&ಕಾಶ್ಮೀರ ವಿರುದ್ಧ ನಡೆದ ರಣಜಿ ಟ್ರೋಫಿ ಲೀಗ್ ಪಂದ್ಯದಲ್ಲಿ ಕರ್ನಾಟಕ 117 ರನ್ ಗಳಿಂದ ಭರ್ಜರಿ ಗೆಲುವು ಕಂಡಿದೆ.
ಗೆಲ್ಲಲು 435 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಜಮ್ಮು ಇಂದು 390 ಕ್ಕೆ ಆಲೌಟ್ ಆಯಿತು. ನಾಯಕ ಇಯಾನ್ ದೇವ್ ಸಿಂಗ್ 110 ರನ್ ಗಳಿಸಿ ಮಿಂಚಿದರು. ತಕ್ಕ ಸಾಥ್ ನೀಡಿದ ಅಬ್ದುಲ್ ಸಮದ್ 70 ರನ್ ಗೆ ಔಟಾದರು.
ಕರ್ನಾಟಕ ಪರ ಪ್ರಸಿದ್ಧ ಕೃಷ್ಣ 4, ಶ್ರೇಯಸ್ ಗೋಪಾಲ್ 4 ಮತ್ತು ಕೆ. ಗೌತಮ್ 2 ವಿಕೆಟ್ ಕಬಳಿಸಿದರು. ಕರ್ನಾಟಕ ಪರ ಮೊದಲ ಇನಿಂಗ್ಸ್ ನಲ್ಲಿ 175 ರನ್ ಗಳಿಸಿದ್ದ ಕರುಣ್ ನಾಯರ್ ಪಂದ್ಯ ಶ್ರೇಷ್ಠರಾದರು. ಇದರೊಂದಿಗೆ ಕರ್ನಾಟಕಕ್ಕೆ ಪೂರ್ಣ ಅಂಕ ಸಿಕ್ಕಿತು.