Webdunia - Bharat's app for daily news and videos

Install App

ಓಡು.. ಓಡೋ…! ಆಫ್ರಿಕಾ ಪಿಚ್ ನಲ್ಲಿ ಕೆಎಲ್ ರಾಹುಲ್-ಪ್ರಸಿದ್ಧ ಕನ್ನಡದ ಕಂಪು

Webdunia
ಬುಧವಾರ, 27 ಡಿಸೆಂಬರ್ 2023 (16:54 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಗ ಕೆಎಲ್ ರಾಹುಲ್ ಶತಕ ಸಿಡಿಸಿ ಮಿಂಚಿದ್ದಾರೆ.

ಬಹುಶಃ ಕೆಎಲ್ ರಾಹುಲ್ ಪ್ರತೀ ಬಾರಿ ಶತಕ ಸಿಡಿಸುವಾಗಲೂ ಒತ್ತಡದಲ್ಲೇ ಶತಕ ಗಳಿಸುವ ಪರಿಸ್ಥಿತಿ ಬರುತ್ತದೆಯೇನೋ. ವಿಶ್ವಕಪ್ ಸಂದರ್ಭದಲ್ಲಿಯೂ ಅವರು ಇನ್ನೇನು ಪಂದ್ಯ ಮುಗಿಯುತ್ತಿದೆ ಎನ್ನುವಾಗ ಶತಕ ಗಳಿಸುವ ಒತ್ತಡದಲ್ಲಿದ್ದರು. ಆ ಸಂದರ್ಭದಲ್ಲಿ ಒಮ್ಮೆ ಶತಕ ವಂಚಿತರಾಗಿದ್ದರೆ ಮತ್ತೊಮ್ಮೆ ಸಿಕ್ಸರ್ ಸಿಡಿಸಿ ಶತಕ ಗಳಿಸಿಯೇ ಬಿಟ್ಟಿದ್ದರು.

ಇಂದೂ ಅವರದ್ದು ಅದೇ ಪರಿಸ್ಥಿತಿಯಾಗಿತ್ತು. ಆಗಲೇ 8 ವಿಕೆಟ್ ಕಳೆದುಕೊಂಡು ಬಾಲಂಗೋಚಿಗಳನ್ನು ಇಟ್ಟುಕೊಂಡು ರಾಹುಲ್ ಶತಕ ಸಿಡಿಸಿದ್ದೇ ಪವಾಡ. ಕೊನೆಯ ಹಂತದಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ಶತಕದ ಸಮೀಪ ಬಂದಾಗ ಭಾರತದ 9 ನೇ ವಿಕೆಟ್ ಪತನವಾಗಿತ್ತು.

ಆ ಸಂದರ್ಭದಲ್ಲಿ ಕೊನೆಯ ಬ್ಯಾಟಿಗನಾಗಿ ಚೊಚ್ಚಲ ಪಂದ್ಯವಾಡುತ್ತಿರುವ ಪ್ರಸಿದ್ಧ ಕೃಷ್ಣ ಕ್ರೀಸ್ ಗೆ ಬಂದಿದ್ದರು. ಹೇಗಾದರೂ ಮಾಡಿ ತಮ್ಮ ಬಳಿ ಸ್ಟ್ರೈಕ್ ಇರುವಂತೆ ನೋಡಿಕೊಳ್ಳಲು ಕೆಎಲ್ ರಾಹುಲ್ ಚೆಂಡು ಕೀಪರ್ ಕೈ ಸೇರಿದ್ದರೂ ಓಡಿ ರನ್ ಕದ್ದಿದ್ದರು.

ಆದರೆ ಇನ್ನೊಂದು ಓವರ್ ನಲ್ಲಿ ಪ್ರಸಿದ್ಧ ಸ್ಟ್ರೈಕ್ ಮಾಡಲೇಬೇಕಾಗಿತ್ತು. ಆದರೆ ಇತ್ತ ಕಡೆ ಇದ್ದ ರಾಹುಲ್ ಗೆ ಟೆನ್ ಷನ್. ಹೀಗಾಗಿ ಚೆಂಡು ಕೊಂಚ ದೂರದಲ್ಲೇ ತಳ್ಳಿದರೂ ಕನ್ನಡದಲ್ಲೇ ‘ಓಡು ಓಡೋ’ ಎಂದು ಕನ್ನಡದಲ್ಲಿ ಹೇಳಿ ರನ್ ಕದಿಯಲು ಯತ್ನಿಸಿದರು. ಹೇಳಿ ಕೇಳಿ ಇಬ್ಬರೂ ಕನ್ನಡಿಗರೇ. ಹೀಗಾಗಿ ಕ್ರೀಸ್ ನಲ್ಲಿದ್ದಷ್ಟೂ ಹೊತ್ತು ರಾಹುಲ್ ಮತ್ತು ಪ್ರಸಿದ್ಧ ಕನ್ನಡದಲ್ಲೇ ಮಾತನಾಡಿಕೊಂಡು ಹೇಗೋ ಶತಕ ಸಿಡಿಸುವವರೆಗೆ ಸಂಭಾಳಿಸಿಕೊಂಡರು. ಅವರಿಬ್ಬರ ಕನ್ನಡ ಸಂಭಾಷಣೆ ಎಲ್ಲರ ಗಮನ ಸೆಳೆಯಿತು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ಮುಂದಿನ ಸುದ್ದಿ
Show comments