IND vs ENG: ಕೆಎಲ್ ರಾಹುಲ್ ಶತಕಕ್ಕಾಗಿ ವಿಕೆಟ್ ತ್ಯಾಗ ಮಾಡಿದ ರಿಷಭ್ ಪಂತ್ video

Krishnaveni K
ಶನಿವಾರ, 12 ಜುಲೈ 2025 (17:50 IST)
Photo Credit: X
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಶತಕಕ್ಕಾಗಿ ರಿಷಭ್ ಪಂತ್ ವಿಕೆಟ್ ತ್ಯಾಗ ಮಾಡಿದಂತಾಗಿದೆ.

ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 387 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿರುವ ಟೀಂ ಇಂಡಿಯಾ ಮೂರನೇ ದಿನದ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ. ನಿನ್ನೆ ಅಜೇಯರಾಗುಳಿದಿದ್ದ ರಿಷಭ್ ಪಂತ್ ಇಂದು ಅರ್ಧಶತಕ ಗಳಿಸಿದರು.

ಆದರೆ ಭೋಜನ ವಿರಾಮಕ್ಕೆ ಕೊನೆಯ ಓವರ್ ನಲ್ಲಿ ರಾಹುಲ್ 98 ರನ್ ಗಳಿಸಿದ್ದರು. ಈ ವೇಳೆ ಸ್ಟ್ರೈಕ್ ಪಂತ್ ಬಳಿಯಿತ್ತು. ರಾಹುಲ್ 2 ರನ್ ಗಳಿಸಲಿ ಎಂದು ಪಂತ್ ಇನ್ನಿಲ್ಲದ ರನ್ ಗೆ ಓಡಲು ಪ್ರಯತ್ನಿಸಿದರು. ಪರಿಣಾಮವಾಗಿ ಬೆನ್ ಸ್ಟೋಕ್ಸ್ ಎಸೆದ ಚೆಂಡಿಗೆ ರನೌಟ್ ಆದರು. ಇದರೊಂದಿಗೆ 74 ರನ್ ಗಳಿಸಿದ್ದ ರಿಷಭ್ ಪೆವಿಲಿಯನ್ ಸೇರುವಂತಾಯಿತು.

ಶತಕ ಗಳಿಸುವ ಧಾವಂತದಲ್ಲಿ ಓಡಿದ ಕೆಎಲ್ ರಾಹುಲ್ ಈಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ಶತಕ ಊಟದ ವಿರಾಮದ ನಂತರವೂ ಹೊಡೆಯಬಹುದಿತ್ತು. ಆದರೆ ಅದಕ್ಕಾಗಿ ರಿಷಭ್ ಪಂತ್ ರ ಅಮೂಲ್ಯ ವಿಕೆಟ್ ಕಳೆದುಕೊಳ್ಳುವಂತಾಯಿತಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ಇನ್ನೂ ಮೊದಲ ಇನಿಂಗ್ಸ್ ನಲ್ಲಿ 139 ರನ್ ಗಳ ಹಿನ್ನಡೆಯಲ್ಲಿದೆ.



ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸೂರ್ಯಕುಮಾರ್ ಯಾದವ್ ಸೇನೆಗೆ ದೇಣಿಗೆ ಕೊಟ್ಟಾಯ್ತು, ಎಎಪಿ ನಾಯಕ ಯಾವಾಗ ಎಂದು ಪ್ರಶ್ನಿಸಿದ ನೆಟ್ಟಿಗರು

ಟೀಂ ಇಂಡಿಯಾಗೆ ಕಪ್ ಸಿಗಬೇಕಾದ್ರೆ ಮೊಹ್ಸಿನ್ ನಖ್ವಿ ಹೇಳುವ ಈ ಷರತ್ತು ಒಪ್ಪಿಕೊಳ್ಳಬೇಕಂತೆ

ದೇಶದ ಪ್ರಧಾನಿಯೇ ಹೀಗೆ ಹೇಳುವಾಗ.. ಮೋದಿ ಹೇಳಿಕೆ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ

ಟ್ರೋಫಿ ಕದ್ದೊಯ್ದ ಮೊಹ್ಸಿನ್ ನಖ್ವಿ ಭಾರತದ ವಿರುದ್ಧವೇ ಟ್ವೀಟ್: ಕೆಲವೇ ಕ್ಷಣಗಳಲ್ಲಿ ಎಕ್ಸ್ ಖಾತೆ ಬ್ಯಾನ್

ಮರ್ಯಾದೆ ಇದ್ರೆ ಮೊಹ್ಸಿನ್ ನಖ್ವಿ ಟೀಂ ಇಂಡಿಯಾ ಗೆದ್ದ ಟ್ರೋಫಿ ಹಿಂದಿರುಗಿಸ್ತಾರೆ ಇಲ್ಲಾಂದ್ರೆ.. ಬಿಸಿಸಿಐ ಖಡಕ್ ನಿರ್ಧಾರ

ಮುಂದಿನ ಸುದ್ದಿ
Show comments