Webdunia - Bharat's app for daily news and videos

Install App

ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಗೆ ಈ ಪಾಟಿ ಸಿಟ್ಟು ಬಂದಿದ್ದೇಕೆ?!

Webdunia
ಸೋಮವಾರ, 26 ಮಾರ್ಚ್ 2018 (07:02 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮೇಲೆ ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ ಆದ ಬಾಲ್ ಟೆಂಪರಿಂಗ್ ಘಟನೆ.

ಹಿಂದೊಮ್ಮೆ ಇದೇ ಆಸೀಸ್ ತಂಡದ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು ಎಂಬ ಆರೋಪಕ್ಕೊಳಗಾಗಿದ್ದ ಹರ್ಭಜನ್ ಸಿಂಗ್ ಇದೀಗ ಆಸೀಸ್ ಆಟಗಾರರ ವಿಚಾರದಲ್ಲಿ ಐಸಿಸಿ ನಡೆದುಕೊಂಡ ರೀತಿಗೆ ಸಿಟ್ಟಾಗಿದ್ದಾರೆ.

ಬಾಲ್ ಟೆಂಪರಿಂಗ್ ಮಾಡಿದ್ದಕ್ಕೆ ಆಸೀಸ್ ನಾಯಕ ಸ್ಮಿತ್ ಗೆ ಒಂದು ಪಂದ್ಯದ ನಿಷೇಧ ಮತ್ತು ಶೇ.100 ರಷ್ಟು ಪಂದ್ಯದ ಸಂಭಾವನೆಯಲ್ಲಿ ದಂಡದ ಶಿಕ್ಷೆಯನ್ನು ಐಸಿಸಿ ನೀಡಿದೆ. ಹಾಗಿದ್ದರೂ ಹರ್ಭಜನ್ ಐಸಿಸಿ ತಾರತಮ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಜಿ ‘ವಾವ್ ಐಸಿಸಿ. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಕಾನೂನಾ? ದ.ಆಫ್ರಿಕಾದಲ್ಲಿ 2001 ರಲ್ಲಿ ನಾವು ಹೆಚ್ಚು ಬಾರಿ ಅಪೀಲ್ ಮಾಡಿದೆವೆಂದು 6 ಮಂದಿಗೆ ನಿಷೇಧ ಹೇರಿದ್ರಿ? ಈಗ್ಯಾಕೆ ಚೆಂಡು ವಿರೂಪಗೊಳಿಸಿದ ಬ್ಯಾನ್ ಕ್ರಾಫ್ಟ್ ಗೆ ನಿಷೇಧವಿಲ್ಲ? 2008 ರ ಸಿಡ್ನಿ ಟೆಸ್ಟ್ ಘಟನೆ ನಿಮಗೆ ನೆನಪಿಲ್ಲವೇ? ತಪ್ಪು ಮಾಡದೆಯೂ 3 ಪಂದ್ಯಕ್ಕೆ ನಿಷೇಧ ಹೇರಿದಿರಿ. ಈಗ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ನಿಯಮ’ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments