Publish Date: Mon, 05 Sep 2022 (09:30 IST)
Updated Date: Mon, 05 Sep 2022 (09:39 IST)
ದುಬೈ: ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಅರ್ಷ್ ದೀಪ್ ಸಿಂಗ್ ಕ್ಯಾಚ್ ಬಿಟ್ಟಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ಎದುರಿಸುತ್ತಿದ್ದಾರೆ.
ಅರ್ಷ್ ದೀಪ್ ರನ್ನು ಪಾಕಿಸ್ತಾನಕ್ಕೆ ಪಂದ್ಯ ಬಿಟ್ಟುಕೊಟ್ಟ ವಿಲನ್ ಎಂಬಂತೆ ಟೀಕಿಸಲಾಗುತ್ತಿದೆ. ಇದರ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ಮತ್ತು ಕೆಲವು ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.
18 ನೇ ಓವರ್ ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್ ನಲ್ಲಿ ಅರ್ಷ್ ದೀಪ್ ಸಿಂಗ್ ಸುಲಭ ಕ್ಯಾಚ್ ಒಂದನ್ನು ಕೈ ಚೆಲ್ಲಿದ್ದರು. ಬಹುಶಃ ಅರ್ಷ್ ದೀಪ್ ಕ್ಯಾಚ್ ಯಶಸ್ವಿಗೊಳಿಸಿದ್ದರೆ ಫಲಿತಾಂಶ ಬೇರೆಯದೇ ಆಗುತ್ತಿತ್ತೇನೋ. ಆದರೆ ಅರ್ಷ್ ದೀಪ್ ಮಾಡಿದ ತಪ್ಪಿನಿಂದ ಪಾಕ್ ಮೇಲುಗೈ ಸಾಧಿಸಿದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಭಾರೀ ಟೀಕೆಗೊಳಗಾಗಿರುವ ಅರ್ಷ್ ದೀಪ್ ಪರವಾಗಿ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಹಫೀಜ್ ಮುಂತಾದವರು ಪ್ರತಿಕ್ರಿಯಿಸಿದ್ದಾರೆ. ಇದೆಲ್ಲಾ ಕ್ರೀಡೆಯ ಭಾಗ ಎಂದು ಸಮಾಧಾನಿಸಿದ್ದಾರೆ.