Publish Date: Mon, 24 Dec 2018 (08:59 IST)
Updated Date: Mon, 24 Dec 2018 (09:01 IST)
ಬೆಂಗಳೂರು: ಮನೆಯಲ್ಲಿ ಋಣಾತ್ಮಕ ವಾತಾವರಣವಿದ್ದರೆ, ದೃಷ್ಟಿಯಾಗಿದ್ದರೆ ಪ್ರತಿ ನಿತ್ಯ ಒಂದು ಕೆಲಸ ಮಾಡಿದರೆ ಸಾಕು.
ಹೆಚ್ಚಿನ ಮನೆಗಳಲ್ಲಿ ಪ್ರತಿ ದಿನ ದೀಪ ಹಚ್ಚುವ ಪದ್ಧತಿ ಇರುತ್ತದೆ. ದೀಪ ಹಚ್ಚುವ ವೇಳೆ ಬೆಳಿಗ್ಗೆ ಅಥವಾ ಸಂಜೆ ಧೂಪದ ಹೊಗೆ ಮನೆ ತುಂಬಾ ಹರಡಿ, ಮನೆಯವರೆಲ್ಲರೂ ಜತೆಯಾಗಿ ನಿಂತು ದೇವರಿಗೆ ಆರತಿ ಮಾಡಿ, ಆರತಿ ಸ್ವೀಕರಿಸುವುದರಿಂದ ಮನೆಯಲ್ಲಿನ ಋಣಾತ್ಮಕ ವಾತಾವರಣ ನಿವಾರಣೆಯಾಗುತ್ತದೆ.
ಅಥವಾ ಮನೆಯಲ್ಲಿ ಯಾರಿಗಾದರೂ ದೃಷ್ಟಿಯಾಗಿದ್ದರೆ ಕಬ್ಬಿಣದ ಸಲಾಕೆಯನ್ನು ಕೆಂಪಗೆ ಕಾಯಿಸಿ ಅದನ್ನು ಶುದ್ಧಿ ನೀರಿಗೆ ಅದ್ದಿ ಯಾರಿಗೂ ಗೊತ್ತಾಗದಂತೆ ಆ ನೀರನ್ನು ತಲೆಗೆ ಪ್ರೋಕ್ಷಣೆ ಮಾಡಿ ಉಳಿದ ನೀರನ್ನು ಸೇವಿಸಿದರೆ ದೃಷ್ಟಿ ನಿವಾರಣೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ