Publish Date: Mon, 29 Jul 2019 (08:58 IST)
Updated Date: Mon, 29 Jul 2019 (09:00 IST)
ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗದೇವರಿಗೆ ಆಶ್ಲೇಷ ಪೂಜೆ, ಸರ್ಪಸಂಸ್ಕಾರ ಮಾಡುವ ಮೂಲಕ ವಿಶೇಷವಾಗಿ ನಾಗಾರಾಧನೆ ಮಾಡುವುದನ್ನು ಕೇಳಿದ್ದೇವೆ.
ಆದರೆ ನಾಗಾರಾಧನೆ ಅಥವಾ ನಾಗ ಪೂಜೆಗಳನ್ನು ಯಾವಾಗ ಮಾಡಬೇಕು? ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷ ಬಲಿ ಎಂಬುದು ಮಾನವರಿಂದ ಸರ್ಪ ಸಂಕುಲಕ್ಕೆ ಅಪಚಾರವಾದಾಗ ಉಂಟಾಗಬಹುದಾದ ಸರ್ಪದೋಷದ ನಿವಾರಣೆಗೆ ಮಾಡಲಾಗುವ ಪೂಜೆ.
ಆಶ್ಲೇಷ ನಕ್ಷತ್ರದ ನಕ್ಷತ್ರ ದೇವತೆಯು ಸರ್ಪ. ತನ್ನಿಂದ ಘಟಿಸಿದ ಪ್ರಮಾದದ ಪ್ರಾಯಶ್ಚಿತಕ್ಕಾಗಿ ನಾಗನಿಗೆ ಬಲಿ ಅಥವಾ ಆಹುತಿ ನೀಡುವ ಮೂಲಕ ನಡೆಸುವ ವಿಶೇಷ ಆರಾಧನೆಯೇ ಆಶ್ಲೇಷ ಬಲಿ. ಇದನ್ನು ಮಾಡುವುದರಿಂದ ದೋಷ ಪರಿಹಾರವಾಗಿ ತಲೆಮಾರಿನವರೆಗೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ.