Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಗುರುವಾರ, 28 ಫೆಬ್ರವರಿ 2019 (08:46 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.


ಮೇಷ: ಹೊಸ ಆಸ್ತಿ ಖರೀದಿ ವ್ಯವಹಾರ ಮಾಡುವಿರಿ. ಹಿರಿಯರಿಂದ ಸೂಕ್ತ ಸಲಹೆಗಳು ಬರುವುದು. ಆದರೆ ಉದ್ಯೋಗದಲ್ಲಿ ಕಾರ್ಯದೊತ್ತಡ ಹೆಚ್ಚುವುದು ಮತ್ತು ಅರೋಗ್ಯ ಕೈ ಕೊಡುವುದು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ.

ವೃಷಭ: ದೂರ ಸಂಚಾರ ಮಾಡಬೇಕಾಗಿ ಬರುವುದು. ಆದರೆ ಮಾರ್ಗ ಮಧ್ಯದಲ್ಲಿ ವಾಹನ ಕೈ ಕೊಟ್ಟು ತೊಂದರೆ ಎದುರಿಸಬೇಕಾದೀತು. ನೀರಿಗೆ ಸಂಬಂಧಿಸಿದಂತೆ ನೆರೆ ಹೊರೆಯವರೊಡನೆ ಕಲಹವಾಗಲಿದೆ. ಸಂಗಾತಿಯ ಅಭಿಪ್ರಾಯಗಳನ್ನು ಆಲಿಸಿರಿ.

ಮಿಥುನ: ಆರ್ಥಿಕ ಪರಿಸ್ಥಿತಿ ಕೊಂಚ ಮಟ್ಟಿಗೆ ಏರುಪೇರಾಗುವುದು. ನಿಮ್ಮ ಕೆಲಸಗಳಿಗೆ ಹಿರಿಯರಿಂದ ವಿರೋಧ ವ್ಯಕ್ತವಾಗುವುದು. ಇದರಿಂದ ಮನೆಯಲ್ಲಿ ಒಂದು ರೀತಿಯ ಬೇಸರದ ವಾತಾವರಣವಿರುವುದು. ತಾಳ್ಮೆಯಿಂದ ಹೆಜ್ಜೆಯಿಡಬೇಕು.

ಕರ್ಕಟಕ: ಆಸ್ತಿಗೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ವ್ಯಾಜ್ಯಗಳಿದ್ದರೆ ಅದು ನಿಮ್ಮ ಪರವಾಗಿ ಬರುವುದು. ನೂತನ ದಂಪತಿಗಳು ಸರಸಮಯ ಕ್ಷಣ ಕಳೆಯುವರು. ಆರ್ಥಿಕವಾಗಿಯೂ ಚೇತರಿಕೆ ಕಾಣುವಿರಿ. ಒಟ್ಟಾರೆ ಇಂದು ನಿಮಗೆ ಶುಭದಿನ.

ಸಿಂಹ: ಮಹಿಳೆಯರಿಂದ ತೊಂದರೆಗೆ ಸಿಲುಕಿಕೊಳ್ಳಬೇಕಾದೀತು. ಮಕ್ಕಳ ಕೆಟ್ಟವರೊಂದಿಗಿನ  ಸ್ನೇಹದ ಬಗ್ಗೆ ಚಿಂತೆಯಾಗುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಕಿರಿ ಕಿರಿ. ಮಿತ್ರರೂ ಇಂದು ಶತ್ರುಗಳಾಗುವರು. ಎಚ್ಚರಿಕೆ ಅಗತ್ಯ.

ಕನ್ಯಾ: ಆಯ-ವ್ಯಯ ಲೆಕ್ಕಾಚಾರಗಳನ್ನು ಸರಿಯಾಗಿಟ್ಟುಕೊಳ್ಳಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ಶಿಕ್ಷಕರಿಗೆ ಇಂದು ಶುಭ ದಿನ. ಹಾಗೆಯೇ ವಿದ್ಯಾರ್ಥಿಗಳೂ ನಿರೀಕ್ಷಿತ ಫಲ ಕಾಣುವರು.

ತುಲಾ: ಆರೋಗ್ಯದಲ್ಲಿ ಸುಧಾರಣೆಯಾಗದೇ ಚಿಂತೆಯಾಗುವುದು. ಇದರಿಂದ ನಿಮ್ಮ ದೈನಂದಿನ ಕೆಲಸಕ್ಕೂ ತೊಂದರೆ. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಹೊಸ ಕಾರ್ಯಗಳಿಗೆ ಕೈ ಹಾಕುವಾಗ ವಿಘ್ನಗಳು ಎದುರಾದೀತು.

ವೃಶ್ಚಿಕ: ಆಸ್ತಿ ವ್ಯಾಜ್ಯಗಳು ಕೋರ್ಟು ಮೆಟ್ಟಿಲೇರಲಿವೆ. ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಲಿವೆ. ಕಾರ್ಯನಿಮಿತ್ತ ಸಂಚಾರ ಮಾಡಿದರೆ ಜಯ ಸಿಗುವುದು. ಆದರೆ ಹೊಸ ಕಾರ್ಯಗಳಿಗೆ ಕೈ ಹಾಕುವ ಮುನ್ನ ಸರಿಯಾಗಿ ಆಲೋಚಿಸಿ ಮುನ್ನಡೆಯುವುದು ಒಳ್ಳೆಯದು.

ಧನು: ಆದಾಯವಿದ್ದಷ್ಟೇ ಖರ್ಚೂ ಹೆಚ್ಚುವುದು. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಆದರೆ ಕುಟುಂಬದಲ್ಲಿ ಸಂಗಾತಿಯೊಂದಿಗೆ ಮನಸ್ತಾಪವಾಗುವುದು. ಮಕ್ಕಳ ಆರೋಗ್ಯ ಚಿಂತೆಗೀಡುಮಾಡುವುದು.

ಮಕರ: ಉದ್ಯೋಗಸ್ಥರಿಗೆ ವಿದೇಶ ಪ್ರವಾಸದ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರಕುವುದು. ಮನೆಯಲ್ಲಿ ವಿವಾಹಕ್ಕೆ ಸಂಬಂಧಿಸಿದ ಶುಭ ಕಾರ್ಯ ನೆರವೇರಿಸುವಿರಿ.

ಕುಂಭ: ಬಹುದಿನಗಳಿಂದ ಬಾಕಿಯಿದ್ದ ಸಾಲ ಪಾವತಿಯಾಗಿ ಚೇತರಿಕೆ ಕಾಣುವಿರಿ. ದೇವತಾ ಕಾರ್ಯಗಳನ್ನು ಕೈಗೊಳ್ಳುವಿರಿ. ಅವಿವಾಹಿತರು ಸ್ವಲ್ಪ ದಿನ ಕಾಯಬೇಕು. ಮನೆಗೆ ಅನಿರೀಕ್ಷಿತವಾಗಿ ಬರುವ ನೆಂಟರಿಂದ ಶುಭ ಸುದ್ದಿ.

ಮೀನ: ದೇಹದ ಆರೋಗ್ಯ ಸ್ಥಿತಿ ಮಾನಸಿಕ ಚಿಂತೆಯನ್ನುಂಟುಮಾಡುವುದು. ಕೊಂಚ ಆಲಸ್ಯ ತೋರಿಬರಲಿದೆ. ಹಿರಿಯರೊಂದಿಗೆ ವಾಗ್ವಾದಕ್ಕಿಳಿಯಬೇಡಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಹುದ್ದೆ ಸಿಗುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ                  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments