Publish Date: Sun, 29 Sep 2019 (09:55 IST)
Updated Date: Sun, 29 Sep 2019 (09:57 IST)
ಬೆಂಗಳೂರು : ಜಾತಕದಲ್ಲಿ ಸರ್ಪದೋಷವಿದ್ದವರು ಜೀವನದಲ್ಲಿ ಏಳಿಗೆ ಕಾಣುವುದಿಲ್ಲ. ಅಂತವರು ತಕ್ಷಣ ಆ ಸರ್ಪದೋಷವನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ. ನಿಮಗೆ ಸರ್ಪದೋಷವಿದ್ದಯೇ ಎಂಬುದನ್ನು ಈ ಸೂಚನೆಗಳಿಂದ ತಿಳಿಯಬಹುದು.
ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಕಂಕಣ ಭಾಗ್ಯ ಒದಗಿ ಬರುವುದಿಲ್ಲ. ಎಷ್ಟೇ ವಿದ್ಯಾವಂತರಾಗಿದ್ದರು, ರೂಪವಂತರಾಗಿದ್ದರು ಮದುವೆ ಆಗುವುದಿಲ್ಲ. ಇನ್ನೂ ಕೆಲವರಿಗೆ ಚರ್ಮ ಸಂಬಂಧದ ಕಾಯಿಲೆಗಳು ಬಾಧಿಸುತ್ತವೆ. ಯಾವುದೇ ವೈದ್ಯರ ಬಳಿ ಹೋದರೂ ಗುಣವಾಗುವುದಿಲ್ಲ.
ಕೆಲವರು ಎಲ್ಲಾ ಚೆನ್ನಾಗಿ ಇದ್ದರೂ ಮಾನಸಿಕ ಸಮಸ್ಯೆ ಇಂದ ಬಳಲುತ್ತಾರೆ.ಇನ್ನೂ ಕೆಲವರು ಹಣಕಾಸಿನ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳುತಿರುತ್ತಾರೆ. ಇವರೆಲ್ಲ ಎಷ್ಟೇ ಪ್ರಯತ್ನಿಸಿದರೂ ಪರಿಹಾರ ಮಾತ್ರ ಸಿಗುತ್ತಿರುವುದಿಲ್ಲ. ಇದೆಲ್ಲ ಸರ್ಪದೋಷ ದಿಂದ ಆಗುತ್ತದೆ. ಆದ್ದರಿಂದ ಈ ಸೂಚನೆಗಳು ನಿಮಲ್ಲಿ ಕಂಡುಬಂದರೆ ತಕ್ಷಣ ನಿಮ್ಮ ಜಾತಕ ತೋರಿಸಿ ಪರಿಹರಿಸಿಕೊಳ್ಳಿ.