Webdunia - Bharat's app for daily news and videos

Install App

ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಈ ವಸ್ತುಗಳು ಇರಲೇಬೇಕು

Webdunia
ಬುಧವಾರ, 12 ಸೆಪ್ಟಂಬರ್ 2018 (11:54 IST)
ಬೆಂಗಳೂರು : ಶ್ರಾವಣ ಮಾಸ ಮುಗಿದ ನಂತರ ಬರುವ ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬವೆಂದೇ ಪ್ರತೀಕ. ಈ ಹಬ್ಬದಂದು ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಉಡುಗೊರೆ, ಮೊರದ ಬಾಗಿಲ ಕೊಡುತ್ತಾರೆ. ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಈ ವಸ್ತುಗಳು ಇರಲೇಬೇಕು. ಅದು ಯಾವುವು ಎಂದು ನೋಡೋಣ.


ಗೌರಿ ಹಬ್ಬದಂದು ಮುತ್ತೈದೆಯರಿಗೆ ಕೊಡುವ ಮೊರದ ಬಾಗಿನದಲ್ಲಿ ಗೌರಿ ದೇವಿಯ ಸ್ವರೂಪವಾದ ಅರಶಿನ, ಮಹಾಲಕ್ಷ್ಮೀಯ ಸ್ವರೂಪವಾದ ಕುಂಕುಮ, ಸರಸ್ವತಿಯ ಸ್ವರೂಪವಾದ ಸಿಂಧೂರ, ರೂಪ ಲಕ್ಷ್ಮೀಯ ಸ್ವರೂಪವಾದ ಕನ್ನಡಿ, ಶೃಂಗಾರ ಲಕ್ಷ್ಮೀಯ ಸ್ವರೂಪವಾದ ಬಾಚಣಿಗೆ, ಲಜ್ಜಾ ಲಕ್ಷ್ಮೀಯ ಸ್ವರೂಪವಾದ ಕಾಡಿಗೆ, ಶ್ರೀಲಕ್ಷ್ಮೀಯ ಸ್ವರೂಪವಾದ ಅಕ್ಕಿ, ವರ  ಲಕ್ಷ್ಮೀಯ ಸ್ವರೂಪವಾದ ತೊಗರಿಬೇಳೆ, ಸೀತಾ ಲಕ್ಷ್ಮೀಯ ಸ್ವರೂಪವಾದ ಉದ್ದಿನ ಬೇಳೆ, ಸಂತಾನ ಲಕ್ಷ್ಮೀಯ ಸ್ವರೂಪವಾದ ತೆಂಗಿನಕಾಯಿ, ಧನ ಲಕ್ಷ್ಮೀಯ ಸ್ವರೂಪವಾದ ವೀಳ್ಯದೆಲೆ, ಇಷ್ಟ ಲಕ್ಷ್ಮೀಯ ಸ್ವರೂಪವಾದ ಅಡಿಕೆ, ಜ್ಞಾನ ಲಕ್ಷ್ಮೀಯ ಸ್ವರೂಪವಾದ ಹಣ್ಣುಗಳು, ರಸ ಲಕ್ಷ್ಮೀಯ ಸ್ವರೂಪವಾದ ಬೆಲ್ಲ, ವಸ್ತ್ರ ಲಕ್ಷ್ಮೀಯ ಸ್ವರೂಪವಾದ ವಸ್ತ್ರಗಳು, ವಿದ್ಯಾ ಲಕ್ಷ್ಮೀಯ ಸ್ವರೂಪವಾದ ಹೇಸರುಬೇಳೆ ಇರಲೇಬೇಕು.


ಹಾಗೇ ಮುತ್ತೈದೆಯ ಸೀರೆಯ ಸೆರಗಿನಲ್ಲಿ ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿ ಇರುವುದರಿಂದ ಸೆರಗು ಹಿಡಿದು ಮೊರದ ಬಾಗಿನ ಕೊಡುತ್ತಾರೆ. ಮೊರದ ಬಾಗಿನ ನಾರಾಯಣನ ಅಂಶವಾಗಿದೆ. ಒಳಗಿರುವ ವಸ್ತುಗಳು ಲಕ್ಷ್ಮೀದೇವಿಯ ಸ್ವರೂಪವಾಗಿದ್ದು,  ಈ ಲಕ್ಷ್ಮೀ ನಾರಾಯಣನ ಸ್ವರೂಪವಾದ ಈ ಬಾಗಿನವನ್ನು ತೆಗೆದುಕೊಂಡ ದಂಪತಿಗಳು  ಲಕ್ಷ್ಮೀ ನಾರಾಯಣನ ರೀತಿ ಇರಲಿ ಎಂಬ ಕಾರಣಕ್ಕೆ ಈ ಬಾಗಿನ ಕೊಡುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments