ನವರಾತ್ರಿ ನಾಲ್ಕನೇ ದಿನ ಕೂಷ್ಮಾಂಡ ದೇವಿಯನ್ನು ಯಾಕೆ ಆರಾಧಿಸಬೇಕು

Krishnaveni K
ಭಾನುವಾರ, 6 ಅಕ್ಟೋಬರ್ 2024 (09:14 IST)
Photo Credit: X
ಬೆಂಗಳೂರು: ಇಂದು ನವರಾತ್ರಿಯ ನಾಲ್ಕನೇ ದಿನವಾಗಿದ್ದು, ದುರ್ಗಾದೇವಿಯನ್ನು ಕೂಷ್ಮಾಂಡ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಕೂಷ್ಮಾಂಡ ದೇವಿಯನ್ನು ಯಾಕೆ ಪೂಜಿಸಬೇಕು, ಯಾವ ಮಂತ್ರ ಹೇಳಬೇಕು ಇಲ್ಲಿದೆ ವಿವರ.

ದುರ್ಗೆಯ ನಾಲ್ಕನೇ ರೂಪ ಕೂಷ್ಮಾಂಡ ದೇವಿ. ಕೂಷ್ಮಾಂಡ ದೇವಿಯ ಮುಖದಲ್ಲಿ ತಾಯಿ ಕಳೆ ಎದ್ದು ಕಾಣುತ್ತದೆ. ಆಕೆಯನ್ನು ಪೂಜೆ ಮಾಡುವುದರಿಂದ ಮಾನಸಿಕವಾಗಿ ಅತೀವ ಸಂತೋಷ ಉಂಟುಮಾಡುತ್ತದೆ. ಕೈಯಲ್ಲಿ ಬಿಲ್ಲು ಬಾಣ, ಮಕರಂದ ತುಂಬಿದ ಮಡಕೆ, ಕಮಲದ ಹೂ, ಚಕ್ರ, ಗದೆ ಎಲ್ಲವನ್ನೂ ಹಿಡಿದಿದ್ದರೂ ತಾಯಿ ಅತ್ಯಂತ ಪ್ರಸನ್ನವದನಳಾಗಿರುತ್ತಾಳೆ.

ಶಾಸ್ತ್ರಗಳ ಪ್ರಕಾರ ಕೂಷ್ಮಾಂಡ ದೇವಿ ಹಸಿರು ಬಣ್ಣವನ್ನು ಇಷ್ಟಪಡುತ್ತಾಳೆ. ಹೀಗಾಗಿ ಇಂದು ಹಸಿರು ವಸ್ತ್ರ ಧರಿಸಿ ದೇವಿಯ ಪೂಜೆ ಮಾಡಬೇಕು. ಅಲ್ಲದೆ ಇಂದು ಹಸಿರು ವರ್ಣದ ಬಟ್ಟೆ ತೊಡುವುದು ಮಂಗಳಕರವೆಂದು ನಂಬಲಾಗಿದೆ. ಸಿಂಹದ ಸವಾರಿ ಮಾಡುವ ಈಕೆ ಶಕ್ತಿಯ ಸಂಕೇತವಾಗಿದ್ದಾಳೆ.

ಯಾ ದೇವಿ ಸರ್ವಭೂತೇಷು ಮಾ ಕೂಷ್ಮಾಂಡ ಸಂಸ್ಥಿತಾ
ನಮಸ್ತೈಸೈ ನಮಸ್ತೈಸೈ ನಮಸ್ತೈಸೈ ನಮೋ ನಮಃ

ಬೆಳಿಗ್ಗೆ ಬೇಗ ಎದ್ದು ಮಡಿ ವಸ್ತ್ರ ಧರಿಸಿ ದೇವಿಯ ವಿಗ್ರಹ ಅಥವಾ ಫೋಟೋ ಮುಂದೆ ಈ ಮಂತ್ರವನ್ನು ಜಪಿಸುತ್ತಾ ಪೂಜೆ ಮಾಡುವುದರಿಂದ ಒಳಿತಾಗುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವ ಷಡಕ್ಷರೀ ಸ್ತೋತ್ರಂ ಸೋಮವಾರ ಪಠಿಸಿ

ಶನಿವಾರದಂದು ಶನಿ ದೇವಾಲಯಕ್ಕೆ ಈ ಎರಡು ಸಮಯದಲ್ಲೇ ಭೇಟಿ ನೀಡಬೇಕು

ಶುಕ್ರವಾರ ಯಾರು ಯಾವ ಸಮಯಕ್ಕೆ ಲಕ್ಷ್ಮೀ ಪೂಜೆ ಮಾಡಿದರೆ ಸೂಕ್ತ ತಿಳಿದುಕೊಳ್ಳಿ

ಶ್ರೀ ರಾಧಾ ಕೃಪಾಕಟಾಕ್ಷ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬುಧವಾರ ಗಣೇಶ ಭುಜಂಗಂ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments