Publish Date: Fri, 07 Jun 2019 (08:07 IST)
Updated Date: Fri, 07 Jun 2019 (08:09 IST)
ಬೆಂಗಳೂರು : ಮನುಷ್ಯನ ಬಳಿ ಎಷ್ಟೇ ಹಣವಿದ್ದರೂ ಕೂಡ ಅವರು ಅಂದುಕೊಂಡ ಕೆಲಸ ಮಾತ್ರ ಆಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ದೃಷ್ಟಿ ದೋಷ. ಈ ದೃಷ್ಟಿ ದೋಷದಿಂದ ವಿವಾಹ ವಿಳಂಬ, ಸತಿ ಪತಿ ನಡುವೆ ಜಗಳ, ಅನಾರೋಗ್ಯ ಹಲವು ಸಮಸ್ಯೆಗಳು ಕಾಡುತ್ತದೆ. ಈ ದೃಷ್ಟಿ ದೋಷವನ್ನು ನಿವಾರಿಸಲು ಇಲ್ಲಿದೆ ಪರಿಹಾರ ಮಾರ್ಗ.
ಮನೆಯ ಮುಂಬಾಗಿಲಿನಿಂದ ಹೊರಗೆ ಹೋಗುವಾಗ ಕೆಂಪು ಮೆಣಸಿನ ಕಾಯಿಯನ್ನು ಮನೆಯ ಯಾವುದಾದರೊಂದು ಮೂಲೆಯಲ್ಲಿಟ್ಟು ಕಾಲಿನಿಂದ ಹೊಸಕಿ ತಿರುಗಿ ನೋಡದೆ ಹೊರಗೆ ಹೋದರೆ ಹೋದ ಕಾರ್ಯ ಯಶಸ್ವಿಯಾಗುತ್ತದೆ.
ಹಾಗೇ ಪ್ರವಾಸಕ್ಕೆ ಹೋಗುವಾಗ ಮನೆಯ ಮುಂಬಾಗಿಲಿನಲ್ಲಿ ನಿಂಬೆಹಣ್ಣನ್ನು ಇಟ್ಟು ಕಾಲಿನಿಂದ ಹಿಸುಕಿ 2 ಭಾಗ ಮಾಡಿ ವಿರುದ್ಧ ದಿಕ್ಕಿಗೆ ಎಸೆದು ತಿರುಗಿ ನೋಡದೆ ಹೋದರೆ ಯಾವುದೇ ಅನಾಹುತ ಸಂಭವಿಸುವುದಿಲ್ಲ.
ಹಾಗೇ ದೃಷ್ಟಿ ದೋಷದಿಂದ ಹಣಕಾಸಿನ ಸಮಸ್ಯೆ ಎದುರಾದರೆ ಲಕ್ಷ್ಮೀ ದೇವಿಗೆ ಪೂಜೆ ಮಾಡುವಾಗ ದೇವರ ಫೋಟೊದ ಕೆಳಗೆ ಒಂದು ವೀಳ್ಯದೆಲೆಯನ್ನು ಇಟ್ಟು ಪೂಜೆ ಮುಗಿದ ಬಳಿಕ ಅದನ್ನು 4 ಸುತ್ತು ಮಡಚಿ ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಬೇಕು. ನಂತರ ಅದು ಒಣಗಿದ ಮೇಲೆ ಪುನಃ ಹೀಗೆ ಮಾಡಬೇಕು. ಇದರಿಂದ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ.