Webdunia - Bharat's app for daily news and videos

Install App

ಶುಕ್ರವಾರ ಮನೆಗೆ ಈ ವಸ್ತುಗಳನ್ನು ತಂದರೆ ದಾರಿದ್ರ್ಯ ಬರುತ್ತದೆ

Krishnaveni K
ಶುಕ್ರವಾರ, 5 ಜುಲೈ 2024 (08:38 IST)
ಬೆಂಗಳೂರು: ಶುಕ್ರವಾರ ಲಕ್ಷ್ಮೀ ದೇವಿಯ ವಾರವೆಂದೇ ಪರಿಗಣಿತವಾಗಿದೆ. ಈ ದಿನ ಶುಭ ಕೆಲಸಗಳಿಗೆ ಯೋಗ್ಯವಾದ ದಿನ. ಆದರೆ ಕೆಲವೊಂದು ವಸ್ತುಗಳನ್ನು ಈ ದಿನ ಖರೀದಿಸಿ ಮನೆಗೆ ತಂದರೆ ದಾರಿದ್ರ್ಯ ಬರಬಹುದು ಎಂಬ ನಂಬಿಕೆಯಿದೆ. ಅಂತಹ ವಸ್ತುಗಳು ಯಾವುವು ನೋಡಿ.

ಪೂಜೆ ಸಾಮಗ್ರಿಗಳು
ಪೂಜೆ ಸಾಮಗ್ರಿಗಳು ಮಂಗಲಕರ ವಸ್ತುವಾದರೂ ಶುಕ್ರವಾರದಂದು ಇವುಗಳನ್ನು ಖರೀದಿಸಿ ತಂದರೆ ನಿಮ್ಮ ಹಾಗೂ ಮನೆಯವರ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಹೀಗಾಗಿ ಅಪ್ಪಿ ತಪ್ಪಿಯೂ ಶುಕ್ರವಾರ ಪೂಜಾ ಸಾಮಗ್ರಿಗಳನ್ನು ಮನೆಗೆ ತರಬೇಡಿ. ಇದರಿಂದ ದಾರಿದ್ರ್ಯ ಬರಬಹುದು.
ಅಡುಗೆ ಪಾತ್ರೆಗಳು
ಶುಕ್ರವಾರದಂದು ಅಡುಗೆ ಮನೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಮನೆಗೆ ತಂದರೆ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಧಾನ್ಯ ನಷ್ಟವಾಗುವ ಭೀತಿಯಿರುತ್ತದೆ. ಹೀಗಾಗಿ ಈ ದಿನ ಅಡುಗೆ ಮನೆಯ ವಸ್ತುಗಳನ್ನು ಖರೀದಿ ಮಾಡಬೇಡಿ.

ಅದೇ ರೀತಿ ಈ ದಿನ ಹುಳಿ ಪದಾರ್ಥಗಳು, ಇಲೆಕ್ಟ್ರಾನಿಕ್ ವಸ್ತುಗಳು, ಆಸ್ತಿ, ವಾಹನ ಖರೀದಿಗೂ ಸೂಕ್ತ ದಿನವಲ್ಲ. ಅಷ್ಟೇ ಏಕೆ ಶುಕ್ರವಾರದಂದು ಯಾರಾದರೂ ವಸ್ತು ಅಥವಾ ಹಣವನ್ನು ಸಾಲವಾಗಿ ಕೇಳಿದರೂ ಕೊಡಲು ಹೋಗಬೇಡಿ. ಇದರಿಂದ ನಿಮಗೆ ದಾರಿದ್ರ್ಯ ಉಂಟಾಗುವ ಅಪಾಯವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments