Publish Date: Sat, 06 Oct 2018 (08:35 IST)
Updated Date: Sat, 06 Oct 2018 (08:37 IST)
ಬೆಂಗಳೂರು : ಶಿವನಿಗೆ ಬಿಲ್ವಪತ್ರೆ ಅತಿ ಪ್ರಿಯವಾದ ವಸ್ತು. ಇದರಿಂದ ಶಿವನನ್ನು ಪೂಜಿಸಿದರೆ ಆತ ಬೇಗ ಪ್ರಸನ್ನನಾಗಿ ಬೇಡಿದ ವರವನ್ನು ಕರುಣಿಸುತ್ತಾನೆ ಎನ್ನುತ್ತಾರೆ. ಆದರೆ ಈ ಬಿಲ್ವಪತ್ರೆಯನ್ನು ನಮಗೆ ಬೇಕಾದ ಸಮಯದಲ್ಲಿ ಕೀಳುವಂತಿಲ್ಲ. ಆದ್ದರಿಂದ ಇದನ್ನು ಗಿಡದಿಂದ ಕೀಳುವ ವೇಳೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಚತುರ್ಥಿ, ಅಷ್ಠಮಿ, ನವಮಿ, ಚತುರ್ದಶಿ, ಅಮವಾಸ್ಯೆಯಂದು ಬಿಲ್ವಪತ್ರೆಯನ್ನು ಕೀಳಬಾರದು. ಸಂಕ್ರಾಂತಿ ಸಮಯದಲ್ಲಿ ಹಾಗೂ ಸೋಮವಾರ ಯಾವುದೇ ಕಾರಣಕ್ಕೂ ಬಿಲ್ವಪತ್ರೆ ಕೀಳಬಾರದು. ಒಂದು ವೇಳೆ ಹೊಸ ಬಿಲ್ವಪತ್ರೆ ಸಿಕ್ಕಿಲ್ಲವಾದಲ್ಲಿ ಹಳೆ ಪತ್ರೆಯನ್ನು ತೊಳೆದು ಬಳಸಬಹುದು ಎನ್ನುತ್ತಾರೆ ಪಂಡಿತರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.