ಈ ವರ್ಷ ಕ್ರೀಡೆಯಲ್ಲಿ ನಡೆದ ಜಗಳಗಳು, ಮದುವೆಗಳು!

Webdunia
ಶುಕ್ರವಾರ, 22 ಡಿಸೆಂಬರ್ 2017 (09:32 IST)
ಬೆಂಗಳೂರು: ಈ ವರ್ಷ ಕ್ರೀಡೆಯ ವಿಚಾರಕ್ಕೆ ಬಂದರೆ ನಡೆದ ಕೆಲವು ಮಹಾನ್ ವಿವಾದಗಳ ಪೈಕಿ ಕೊಹ್ಲಿ-ಅನಿಲ್ ಕುಂಬ್ಳೆ ವಿವಾದ ದೊಡ್ಡದಾಗಿ ಕಾಣುತ್ತದೆ.
 

ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ವೈಮನಸ್ಯ ತಲೆದೋರಿತ್ತು. ಐಪಿಎಲ್ ಮುಗಿದ ಬಳಿಕ ಇದು ಉಲ್ಬಣಿಸಿ, ಚಾಂಪಿಯನ್ಸ್ ಟ್ರೋಫಿ ವೇಳೆ ತಾರಕಕ್ಕೇರಿತು. ಇದರ ಪರಿಣಾಮ ತಂಡದ ಪ್ರದರ್ಶನದ ಮೇಲಾಯಿತು. ಕೊನೆಗೆ ಕುಂಬ್ಳೆ ರಾಜೀನಾಮೆ ನೀಡಿ ಹೊರಬಂದರು.

ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ನಡುವೆ ಡಿಆರ್ ಎಸ್ ಪಡೆಯುವ ವಿಚಾರಕ್ಕೆ ಸಂಬಂಧವಾಗಿ ನಡೆದ ಜಗಳ ದೊಡ್ಡ ರೂಪ ಪಡೆದಿತು. ಕೊಹ್ಲಿ ಕೊನೆಗೆ ಸ್ಮಿತ್ ಯಾವತ್ತೂ ನನ್ನ ಸ್ನೇಹಿತನಾಗಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದರು.

ಇದಕ್ಕೆ ಹೊರತಾಗಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ಈ ವರ್ಷದ ಅತೀ ದೊಡ್ಡ ಈವೆಂಟ್. ಡಿಸೆಂಬರ್ 11 ರಂದು ಇಟೆಲಿಯಲ್ಲಿ ಮದುವೆಯಾಗುವುದರ ಮೂಲಕ ತಮ್ಮ ದೀರ್ಘ ಕಾಲದ ಒಡನಾಡಕ್ಕೆ ಅನುಷ್ಕಾ ಶರ್ಮಾ ಮತ್ತು ಕೊಹ್ಲಿ  ಅಧಿಕೃತ ಮುದ್ರೆಯೊತ್ತಿದರು.

ಇವರಲ್ಲದೆ, ಕ್ರಿಕೆಟಿಗರಾದ ಯುವರಾಜ್ ಸಿಂಗ್, ಜಹೀರ್ ಖಾನ್, ಭುವನೇಶ್ವರ್ ಕುಮಾರ್, ಕುಸ್ತಿ ಪಟು ಸಾಕ್ಷಿ ಮಲಿಕ್ ಈ ವರ್ಷದ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇತರ ಕ್ರೀಡಾ ಪಟುಗಳು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬರ ಪರಿಸ್ಥಿತಿಯಿಂದ ಕುಡಿಯುವ ನೀರಿಗೆ ತೊಂದರೆ ಆಗಬಾರದೆಂದು ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಬಂಟ್ವಾಳದ ಲಾವಣ್ಯ ಹತ್ಯೆ ಪ್ರಕರಣ: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ನೀಡಿದವರಿಗೆ ಬಿಗ್ ಶಾಕ್

ಅಯೋಧ್ಯೆ ರಾಮಮಂದಿರದ ದೇಣಿಗೆ 'ಕಳ್ಳತನ': ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್‌, ಖರ್ಗೆ

ದೀರ್ಘಕಾಲದ ಸಂಗಾತಿ ಕಳೆದುಕೊಂಡ ದೇವೇಗೌಡರ ಕಣ್ಣೀರು ಒರೆಸಿ ಸಂತೈಸಿದ ಮಾಜಿ ಸಿಎಂ ಸಿದ್ದರಾಮಯ್ಯ

ರಾಮಮಂದಿರ ದೇಣಿಗೆ ವಿವಾದ, ಪ್ರಧಾನ ಮಂತ್ರಿಯವರೇ, ಮೌನ ಮುರಿಯಿರಿ: ಜೈರಾಮ್ ರಮೇಶ್

ಮುಂದಿನ ಸುದ್ದಿ
Show comments