Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಠ ಮಾನ್ಯಗಳು ಸೇರಿದಂತೆ ದೇವಸ್ಥಾನಗಳಲ್ಲಿ ಇರಬೇಕಾದ ನಾಗಸಾಧುಗಳು, ಇತ್ತಿಚಿಗೆ ರಾಜಕಾರಣಿಗಳ ಭೇಟಿ ಮಾಡಿ ಅವರಿಗೆ ಅಧಿಕಾರ ಪಡೆಯುವಂತೆ ಆಶೀರ್ವಚನ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಇದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಇಂದು 15ಕ್ಕೂ ಹೆಚ್ಚು ಜನ ನಾಗಸಾಧುಗಳು ಚಿಕ್ಕಬಳ್ಳಾಪುರ ನಗರದ ರಾಜಕೀಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಸಂಬಂಧಿ ಜಿ.ಎಜ್.ನಾಗರಾಜ್ ಮನೆಗೆ ಭೇಟಿ ನೀಡಿದ್ದರು.
ರಾಜಕೀಯವಾಗಿ ನಾಗರಾಜ್ ಮುಂದೆ ಬರಲಿ ಅಂತ ಆರ್ಶೀವಾದ ಮಾಡಿದರು. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಮೇಲೆ ಸಾಗನಾಧುಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಕರ್ನಾಟಕ ಪ್ರವಾಸ ಮುಗಿಸಿ ಆಂಧ್ರಕ್ಕೆ ಹೋಗುವ ಮಾರ್ಗ ಮಧ್ಯೆ ಮನೆಗೆ ಬಂದಿರುವುದಾಗಿ ನಾಗರಾಜ್ ತಿಳಿಸಿದ್ದಾರೆ.