Publish Date: Sat, 02 Oct 2021 (11:09 IST)
Updated Date: Sat, 02 Oct 2021 (10:01 IST)
ನವದೆಹಲಿ : ಭಾರತ ಹವಾಮಾನ ಇಲಾಖೆ ತನ್ನ ಇತ್ತೀಚಿನ ಬುಲೆಟಿನ್ ನಲ್ಲಿ ಶಾಹೀನ್ ಚಂಡಮಾರುತದಿಂದಾಗಿ ಭಾರತದಾದ್ಯಂತ ಏಳು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ, ಇದು ಮುಂದಿನ 24 ಗಂಟೆಗಳಲ್ಲಿ ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುವ ನಿರೀಕ್ಷೆಯಿದೆ.
ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಗುಜರಾತ್ ಗೆ ಈ ಇತ್ತೀಚಿನ ಹವಾಮಾನ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ 26 ರಂದು ಗುಲಾಬ್ ಚಂಡಮಾರುತವು ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಭೂಸ್ಪರ್ಶ ಮಾಡಿದ ನಂತರ ಬಂದಿದೆ, ಇದು ಮೂರು ಜನರ ಜೀವವನ್ನು ಬಲಿ ತೆಗೆದುಕೊಂಡಿದೆ.
ಐಎಂಡಿ ಬುಲೆಟಿನ್ ಪ್ರಕಾರ, ಈಗ ಶಾಹೀನ್ ಚಂಡಮಾರುತದ ತೀವ್ರತೆ ಭಾರತವಲ್ಲದೆ ಪಾಕಿಸ್ತಾನ ಮತ್ತು ಇರಾನ್ ಬಳಿ ಇದೆ. ಶುಕ್ರವಾರ ಬೆಳಿಗ್ಗೆ 5.30 ರ ಸುಮಾರಿಗೆ, ಶಾಹೀನ್ ಗುಜರಾತ್ ನ ದೇವಭೂಮಿ ದ್ವಾರಕಾದಿಂದ ಪಶ್ಚಿಮ-ವಾಯುವ್ಯಕ್ಕೆ 400ಕಿ.ಮೀ, ಪಾಕಿಸ್ತಾನದ ಕರಾಚಿಯಿಂದ ದಕ್ಷಿಣ-ನೈರುತ್ಯಕ್ಕೆ 260ಕಿ.ಮೀ ಮತ್ತು ಇರಾನ್ ನ ಚಬಹಾರ್ ಬಂದರಿನ ಪೂರ್ವ-ಆಗ್ನೇಯಕ್ಕೆ 530ಕಿ.ಮೀ ದೂರದಲ್ಲಿದೆ.
ಶಾಹೀನ್ ಆಗಮನವು ಗುಲಾಬ್ ಚಂಡಮಾರುತದ ಅವಶೇಷದ ಫಲಿತಾಂಶವಾಗಿದೆ - ಆಳವಾದ , ವಾಯುಭಾರ ಕುಸಿತವಾಗಿ ದುರ್ಬಲಗೊಳ್ಳುವುದು, ಅರಬ್ಬಿ ಸಮುದ್ರದ ಮೇಲೆ ಹೊಸ ಚಂಡಮಾರುತವಾಗಿ ತೀವ್ರಗೊಳ್ಳುವುದು.