Webdunia - Bharat's app for daily news and videos

Install App

ಬೆಂಗಳೂರು ರೇಪ್ಕೇಸ್ ಮರು ವಿಚಾರಣೆ!

Webdunia
ಭಾನುವಾರ, 18 ಜುಲೈ 2021 (15:43 IST)
ನವದೆಹಲಿ(ಜು.18): ಅತ್ಯಾಚಾರ ಆರೋಪಿ ತನ್ನನ್ನು ಮದುವೆ ಆಗುವುದಾಗಿ ಒಪ್ಪಿದ್ದ ಕಾರಣಕ್ಕೆ ಈ ಹಿಂದೆ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದ ಪ್ರಕರಣವನ್ನು ಪುನಃ ವಿಚಾರಣೆ ನಡೆಸುವಂತೆ ಕೋರಿ ಸಂತ್ರಸ್ತ ಯುವತಿ ದಾಖಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.



* ರಾಜಿ ಆಗಿ ರದ್ದಾಗಿದ್ದ ಪ್ರಕರಣ'
* ಬೆಂಗಳೂರು ರೇಪ್ಕೇಸ್ ಮರು ವಿಚಾರಣೆ: ಸುಪ್ರಿಂ ಕೋರ್ಟ್ ಸಮ್ಮತಿ
* ಕರ್ನಾಟಕ ಸರ್ಕಾರ, ಆರೋಪಿಗೆ ನೋಟಿಸ್ ಜಾರಿ

ಈ ಸಂಬಂಧ ಕರ್ನಾಟಕ ಸರ್ಕಾರ ಮತ್ತು ಅತ್ಯಾಚಾರ ಆರೋಪಿ ಆದ ಎಂಬಿಬಿಎಸ್ ವಿದ್ಯಾರ್ಥಿಯಿಂದ ಸುಪ್ರೀಂಕೋರ್ಟ್ ಪ್ರತಿಕ್ರಿಯೆ ಕೇಳಿದೆ.
ಏನಿದು ಪ್ರಕರಣ?:
ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಆದ ಆರೋಪಿ, ಮದುವೆ ಆಗುವುದಾಗಿ ನಂಬಿಸಿ ಸಂತ್ರಸ್ತೆಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ. ಆದರೆ, ಬಳಿಕ ಆತ ಮದುವೆಗೆ ನಿರಾಕರಿಸಿದ ಕಾರಣಕ್ಕೆ ಆತನ ವಿರುದ್ಧ ದೂರು ದಾಖಲಾಗಿತ್ತು. ಬಳಿಕ 2017-2018ರಲ್ಲಿ ಇವರಿಬ್ಬರೂ ರಾಜಿ ಆಗಿ ಮದುವೆ ಆಗಲು ಒಪ್ಪಿದ್ದ ಕಾರಣಕ್ಕೆ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿತ್ತು.
ತನ್ನ ವಿರುದ್ಧದ ಪ್ರಕರಣ ರದ್ದಾದ ಬಳಿಕ ವರಸೆ ಬದಲಿಸಿದ ಆರೋಪಿ, ಸಂತ್ರಸ್ತೆಯನ್ನು ಮದುವೆ ಆಗಲು 1 ಕೋಟಿ ರು. ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಸಂತ್ರಸ್ತೆ ಮದುವೆಗೆ ನಿರಾಕರಿಸಿದ್ದಳು.
ಇದೀಗ ತಾನು ಈ ಹಿಂದೆ ಆರೋಪಿಯ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ದೂರಿನ ಮರು ವಿಚಾರಣೆ ಮಾಡುವಂತೆ ಕೋರಿ ಸಂತ್ರಸ್ತೆ ಸುಪ್ರಿಂಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದಾರೆ.
ರಾಜೀ ಮತ್ತು ಸಂಧಾನದ ಆಧಾರದ ಮೇಲೆ ಪ್ರಕರಣವನ್ನು ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ನ ತೀರ್ಪಿಗೆ ವಿರುದ್ಧವಾಗಿ ಕರ್ನಾಟಕ ಹೈಕೋರ್ಟ್ ಈ ಪ್ರಕರಣದಲ್ಲಿ ತೀರ್ಪು ಪ್ರಕಟಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಸಂತ್ರಸ್ತೆಯ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರಿಂಕೋರ್ಟ್, ಕರ್ನಾಟಕ ಸಕಾರ ಮತ್ತು ಅತ್ಯಾಚಾರ ಆರೋಪಿಗೆ ನೋಟಿಸ್ ಜಾರಿ ಮಾಡಿ ಒಂದು ತಿಂಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಂಗ್ಲಾದೇಶವು ಭಾರತಕ್ಕೆ ಮತ್ತೊಂದು ಪಾಕಿಸ್ತಾನವಾಗಿ ಪರಿಣಮಿಸಿದೆ

ಎಸ್‌ಐಆರ್‌ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡಲಿರುವ ಮತದಾರರ ಸಂಖ್ಯೆ ಎಷ್ಟು ಗೊತ್ತಾ

ಆಸ್ಪತ್ರೆಗೆ ಪತಿ ಜತೆ ಬಂದ ಗರ್ಭಿಣಿಗೆ, ಬೈಕ್‌ನಲ್ಲೇ ಡೆಲಿವರಿ, Video

7 ವರ್ಷಗಳ ಪ್ರೀತಿ, ಮಂಗಳಮುಖಿಯನ್ನು ಕೈ ಹಿಡಿದ ಐಟಿ ಉದ್ಯೋಗಿ, Video

ಒದ್ದು ಹಲ್ಲೆ, ಬಿಎಂಟಿಸಿ ಕಂಡಕ್ಟರ್‌ ವೈರಲ್ ವಿಡಿಯೋ ಬೆನ್ನಲ್ಲೇ ಮಹತ್ವದ ಕ್ರಮ

ಮುಂದಿನ ಸುದ್ದಿ