Webdunia - Bharat's app for daily news and videos

Install App

ಗಟ್ಟಿಮೇಳ ಅಂತ್ಯ: ಅಂತಿಮ ಸಂಚಿಕೆಯಲ್ಲಿರಲಿದೆ ಸರ್ಪೈಸ್

Webdunia
ಶುಕ್ರವಾರ, 29 ಡಿಸೆಂಬರ್ 2023 (09:20 IST)
WD
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಗಟ್ಟಿಮೇಳ ಅಂತ್ಯವಾಗುತ್ತಿದ್ದು, ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿದೆ.

ಇದೀಗ ಧಾರವಾಹಿ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ವಸಿಷ್ಠ ಕುಟುಂಬದ ಹಿರಿಯ ಸೂರ್ಯನಾರಾಯಣ ವಸಿಷ್ಠರನ್ನು ಈಗ ವಿಲನ್ ಅಗ್ನಿ ಮತ್ತು ಆತನ ತಂದೆ ಕಿಡ್ನ್ಯಾಪ್ ಮಾಡಿದ್ದು, ಸೂರ್ಯನಾರಾಯಣ ವಸಿಷ್ಠರನ್ನು ಬಿಡಿಸಿಕೊಳ್ಳುವುದು ಮತ್ತು ವಸಿಷ್ಠ ಕುಟುಂಬ ಒಂದಾಗುವುದೇ ಕ್ಲೈಮ್ಯಾಕ್ಸ್ ಆಗಿರಲಿದೆ.

ಈಗಾಗಲೇ ಅಂತಿಮ ಸಂಚಿಕೆಯ ಶೂಟಿಂಗ್ ನಡೆದಿದೆ. ವಿಶೇಷವೆಂದರೆ ಕಳೆದ ಕೆಲವು ಸಮಯದಿಂದ ಈ ಧಾರವಾಹಿ ನಾಯಕನಿಲ್ಲದೇ ನಡೆಯುತ್ತಿತ್ತು. ನಾಯಕ ವೇದಾಂತ್ ವಸಿಷ್ಠ ಪಾತ್ರ ಮಾಡುತ್ತಿದ್ದ ನಟ ರಕ್ಷ್ ಸಿನಿಮಾ ಕಮಿಟ್ ಮೆಂಟ್ ಗಳಿಂದಾಗಿ ಧಾರವಾಹಿಯಿಂದ ದೂರವಾಗಿದ್ದರು.

ಇದು ಅಭಿಮಾನಿಗಳಿಗೂ ಬೇಸರವಾಗಿತ್ತು. ನಾಯಕ ವೇದಾಂತ್ ವಾಪಸ್ ಕರೆಸಿ ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಳ್ಳುತ್ತಲೇ ಇದ್ದರು. ಇದೀಗ ವೀಕ್ಷಕರಿಗೆ ಸರ್ಪೈಸ್ ನೀಡಲು ಅಂತಿಮ ಸಂಚಿಕೆಗೆ ವೇದಾಂತ್ ಆಗಮನವಾಗಿದೆ. ಕೇವಲ ವೇದಾಂತ್ ಮಾತ್ರವಲ್ಲ, ವಿಕ್ರಾಂತ್ ವಸಿಷ್ಠ ಕೂಡಾ ಪುನರಾಗಮನ ಮಾಡಿದ್ದಾರೆ. ಹೀಗಾಗಿ ಅಂತಿಮ ಸಂಚಿಕೆ ವೀಕ್ಷಕರಿಗೆ ನಿಜಕ್ಕೂ ಸರ್ಪೈಸಿಂಗ್ ಆಗಿರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments