Webdunia - Bharat's app for daily news and videos

Install App

ಜೊತೆ ಜೊತೆಯಲಿ ಕೊನೇ ದಿನ ತಂಡದೊಂದಿಗೆ ಅನಿರುದ್ಧ್ ಜತ್ಕಾರ್!

Webdunia
ಶನಿವಾರ, 20 ಮೇ 2023 (14:08 IST)
Photo Courtesy: facebook
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಕೊನೆಯ ಎಪಿಸೋಡ್ ನಿನ್ನೆ ರಾತ್ರಿ ಪ್ರಸಾರವಾಗಿದ್ದು, ಧಾರವಾಹಿ ಮುಕ್ತಾಯಗೊಂಡಿದೆ.

ಇದರ ಬೆನ್ನಲ್ಲೇ ಕಲಾವಿದರು, ನಿರ್ದೇಶಕ ಆರೂರು ಜಗದೀಶ್ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಲಾವಿದರು ಕೊನೆಯ ದಿನದ ಚಿತ್ರೀಕರಣದ ಫೋಟೋಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ವಿಶೇಷವೆಂದರೆ ಧಾರವಾಹಿ ತಂಡದೊಂದಿಗೆ ನಟ ಅನಿರುದ್ಧ್ ಜತ್ಕಾರ್ ಮತ್ತು ಪತ್ನಿ ಕೀರ್ತಿ ವರ್ಧನ್ ಕೂಡಾ ಕಾಣಿಸಿಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ಮಿಂಚಿದ್ದ ಅನಿರುದ್ಧ್ ಬಳಿಕ ವಿವಾದದಿಂದಾಗಿ ಧಾರವಾಹಿಯಿಂದ ಹೊರನಡೆದಿದ್ದರು. ಅವರ ಸ್ಥಾನಕ್ಕೆ ಹರೀಶ್ ರಾಜ್ ಬಂದಿದ್ದರು.

ಆದರೆ ಅನಿರುದ್ಧ್ ಹೊರನಡೆಯುತ್ತಿದ್ದಂತೇ ಧಾರವಾಹಿಯ ಟಿಆರ್ ಪಿ ಕಡಿಮೆಯಾಗಿತ್ತು. ಹಾಗಿದ್ದರೂ ಇಷ್ಟು ದಿನಗಳ ಕಾಲ ಧಾರವಾಹಿ ಮುಂದುವರಿಸಲಾಗಿತ್ತು. ಈ ಧಾರವಾಹಿಯಲ್ಲಿ ನಾಯಕಿ ಅನು ಸಿರಿಮನೆ ಪಾತ್ರದ ಮನೆಯ ಚಿತ್ರೀಕರಣ ನಡೆಸುತ್ತಿದ್ದ ಬಸವನಗುಡಿಯ ಶೂಟಿಂಗ್ ಮನೆ ಮಾಲಿಕರು ಧಾರವಾಹಿ ತಂಡಕ್ಕೆ ವಿಶೇಷ ಔತಣ ಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕೆ ಎಲ್ಲಾ ಕಲಾವಿದರ ಜೊತೆ ಅನಿರುದ್ಧ್ ಕೂಡಾ ಆಗಮಿಸಿದ್ದರು. ಕೊನೆಯ ದಿನದ ಫೋಟೋ ಸೆಷನ್ ನಲ್ಲಿ ಅನಿರುದ್ಧ್ ಅವರನ್ನು ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments