Webdunia - Bharat's app for daily news and videos

Install App

ಒಮ್ಮೆ ಈ ಸೀರಿಯಲ್ ಮುಗಿಸಿ..! ಅಗ್ನಿಸಾಕ್ಷಿ, ಪುಟ್ಟಗೌರಿ ಮದುವೆ ಹಿಂದೆ ಬಿದ್ದ ವೀಕ್ಷಕರು

Webdunia
ಗುರುವಾರ, 10 ಜನವರಿ 2019 (09:45 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ, ಪುಟ್ಟಗೌರಿ ಮದುವೆ ಧಾರವಾಹಿ ಶುರುವಾಗಿ ಆರೇಳು ವರ್ಷವಾದರೂ ಮುಗಿಯುವ ಸೂಚನೆಯೇ ಕಾಣುತ್ತಿಲ್ಲ. ಈ ಎರಡು ಧಾರವಾಹಿಗಳು ಇತ್ತೀಚೆಗೆ ಬೋರ್ ಹೊಡೆಸುತ್ತಿರುವುದು ನೋಡಿ ವೀಕ್ಷಕರೇ ಒಮ್ಮೆ ಇವೆರಡಕ್ಕೆ ಇತಿಶ್ರೀ ಹಾಡಿ ಎಂದು ಒತ್ತಾಯಿಸಲು ಆರಂಭಿಸಿದ್ದಾರೆ.

ಅಗ್ನಿಸಾಕ್ಷಿ ಶುರುವಾದ ಮೇಲೆ ನಮ್ಮ ರಾಜ್ಯ ಆರು ಮಂದಿ ಮುಖ್ಯಮಂತ್ರಿ ಕಂಡಿದ್ದೇವೆ. ಇನ್ನೂ ಈ ಧಾರವಾಹಿ ಮುಗಿಯುವ ಸೂಚನೆ ಕಾಣುತ್ತಿಲ್ಲವಲ್ಲ ಎಂದು ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಹಿಡಿಶಾಪ ಹಾಕುತ್ತಿದ್ದಾರೆ.

ಅಗ್ನಿಸಾಕ್ಷಿ ಮಹಾಸಂಚಿಕೆ ಬಂದ ಮೇಲಂತೂ ಕೆಲವು ಕಿಡಿಗೇಡಿಗಳೇ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಗ್ನಿಸಾಕ್ಷಿ ಮುಗಿಯಿತು ಎಂದು ಇತಿಶ್ರೀ ಹಾಡುತ್ತಿದ್ದಾರೆ. ಅತ್ತ ಪುಟ್ಟ ಗೌರಿಯದ್ದೂ ಇದೇ ಕತೆ.

ಈ ಧಾರವಾಹಿ ಟ್ರೋಲ್ ಆದಷ್ಟು ಇನ್ಯಾವುದೂ ಆಗಿರಲ್ಲ. ಇತ್ತೀಚೆಗೆ ಲೀಡಿಂಗ್ ಪಾತ್ರಗಳಾದ ಗೌರಿ, ಮಹೇಶನ ಬಿಟ್ಟು ಕತೆ ಮಂಗಳ ಗೌರಿ ಎಂಬ ಪಾತ್ರದ ಮೇಲೇ ಸಾಗುತ್ತಿದೆ. ಇದನ್ನು ನೋಡಿದ ಮೇಲಂತೂ ಅಭಿಮಾನಿಗಳ ಸಹನೆಯ ಕಟ್ಟೆಯೊಡೆದಿದೆ. ಟೈಟಲ್ ಗೂ, ಕತೆಗೂ ಸಂಬಂಧವೇ ಇಲ್ಲ. ಟ್ವಿಸ್ಟ್ ಇಲ್ಲ, ಕನ್ ಕ್ಲೂಷನ್ ಇಲ್ಲ.. ಇನ್ನೂ ಯಾಕೆ ಈ ಧಾರವಾಹಿ ಪ್ರಸಾರ ಮಾಡುತ್ತಿದ್ದೀರಾ ಎಂದು ಇನ್ನು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.





ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ
Show comments