Publish Date: Fri, 28 Aug 2020 (18:26 IST)
Updated Date: Fri, 28 Aug 2020 (23:39 IST)
ಕೈ ಹಿಡಿದ ಪತ್ನಿಯ ಮೇಲೆ ಹಲ್ಲೆ ನಡೆಸಿ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕುಡಿದು ಬಂದು ಪತ್ನಿ ರತ್ನಮ್ಮಳೊಂದಿಗೆ ಜಗವಾಡಿದ ಅಂಧ ಪತಿ ಮಂಜುನಾಥ್ ತನ್ನ ಪತ್ನಿಯ ಮೈ, ಕೈ, ಗುಪ್ತಾಂಗಕ್ಕೆ ಕಚ್ಚಿ ಗಾಯಗೊಳಿಸಿ, ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಕೋಲಾರದ ಬಂಗಾರಪೇಟೆ ತಾಲೂಕಿನಲ್ಲಿ ಘಟನೆ ನಡೆದಿದ್ದು, ಅಂಧನಾಗಿರುವ ಮಂಜುನಾಥ್ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದನು.
ನಶೆಯ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳವಾಡಿದಾಗ ಹಿಗ್ಗಾ ಮುಗ್ಗಾ ಥಳಿಸಿ, ಕಚ್ಚಿ ಕೊಲೆ ಮಾಡಿದ್ದಾನೆ ಎಂಬ ಸುದ್ದಿ ಹರಿದಾಡುತ್ತಿದೆ.