Webdunia - Bharat's app for daily news and videos

Install App

ಕ್ಯೂಆರ್ ಕೋಡ್ ಕೂಡ ಡೇಂಜರ್ ಯಾಕೆ!

Webdunia
ಬುಧವಾರ, 1 ಡಿಸೆಂಬರ್ 2021 (12:32 IST)
ದೇಶಾದ್ಯಂತ ಡಿಜಿಟಲ್ ಇಂಡಿಯಾ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದ್ದು, ಈ ಬಗ್ಗೆ ದೊಡ್ಡ ಮಟ್ಟದ ಪ್ರಚಾರವೇ ನಡೆಯುತ್ತಿದೆ.
ಆದರೆ ಇದೇ ತಂತ್ರಜ್ಞಾನವನ್ನು ವಿದ್ರೋಹಿ ಸಂಘಟನೆಗಳು ದುರ್ಬಳಕೆ ಮಾಡುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದ್ದು, ಪ್ರತಿನಿತ್ಯ ಕೋಟ್ಯಂತರ ರೂ. ವಂಚಿಸಲಾಗುತ್ತಿದೆ.
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧದ ಮೂಲ ಬಹುತೇಕ ಉತ್ತರ ಭಾರತದ ಜಾರ್ಖಂಡ್, ಪಶ್ಚಿಮ ಬಂಗಾಳ, ಬಿಹಾರ, ದಿಲ್ಲಿ, ಒಡಿಶಾ ಆಗಿದೆ. ವಿದ್ರೋಹಿ ಸಂಘಟನೆಯಲ್ಲಿ ಗುರುತಿಸಿಕೊಂಡವರು ಆ ರಾಜ್ಯದ ಕುಗ್ರಾಮ, ಆದಿವಾಸಿಗಳು, ಹಳ್ಳಿಯಲ್ಲಿರುವ ಮುಗ್ಧ ಜನರ ಆಧಾರ್ ಕಾರ್ಡನ್ನು 1 ಸಾವಿರ ರೂ.ಗೆ ಪಡೆದು ಅದೇ ಆಧಾರದಲ್ಲಿ ಮೊಬೈಲ್ ಸಿಮ್ ಪಡೆಯುತ್ತಾರೆ. ಬಳಿಕ ಅದನ್ನೇ ದಾಖಲೆಯಾಗಿಟ್ಟು ಆನ್ಲೈನ್ ಮೂಲಕ ಬ್ಯಾಂಕ್ ಖಾತೆ ತೆರೆದು ದಂಧೆ ಶುರುವಿಟ್ಟುಕೊಳ್ಳುತ್ತಾರೆ.
ಪೆಟ್ರೋಲ್ ಬಂಕ್, ಶಾಪಿಂಗ್ ಮಾಲ್, ಮೆಡಿಕಲ್ ಸೇರಿದಂತೆ ನಾನಾ ಕಡೆ ಪೇಟಿಎಂ, ಕ್ಯೂಆರ್ ಕೋಡ್ ಹಾಕಲಾಗುತ್ತಿದ್ದು, ಆ ಮೂಲಕ ಗ್ರಾಹಕರು ಪೇಮೆಂಟ್ ವ್ಯವಹಾರ ಮಾಡುತ್ತಿದ್ದಾರೆ. ಆದರೆ ಈ ವ್ಯವಹಾರ ಕೂಡ ಡೇಂಜರ್ ಆಗಿದ್ದು, ಒರಿಜಿನಲ್ ಕ್ಯೂಆರ್ ಕೋಡ್ ಮೇಲೆ ಯಾರದೋ ಕ್ಯೂಆರ್ ಕೋಡ್ ಲಗತ್ತಿಸಿ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿದೆ ಬಂದಿದೆ ಎನ್ನುತ್ತಾರೆ ಸೈಬರ್ ಪೊಲೀಸರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿಢೀರನೇ ಆಸ್ಪತ್ರೆಗೆ ದಾಖಲಾದ ಆರೋಗ್ಯ ಸಚಿವ ಜೆಪಿ ನಡ್ಡಾ

ಮಗು ಕಾರಿನಡಿಗೆ ಬಿದ್ದರೂ ಕಣ್ಣಿಗೆ ಕಾಣಿಸಿಲ್ಲಾಂದ್ರೆ ಇವನೆಂಥಾ ಡ್ರೈವರ್… ಭೀಕರ ಅಪಘಾತ Video

ವಿಡಿ ಸಾವರ್ಕರ್ ಅವಹೇಳನ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಪ್ರಕರಣ ಸುಪ್ರೀಂ ರದ್ದು

ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖಾಧಿಕಾರಿ ಎಸ್‌ಪಿ ಎಸ್ ಶಶಿಧರನ್‌ಗೆ ರಾಷ್ಟ್ರಪತಿಗಳ ಪದಕ

ನಿಮ್ಮದೇ ಭಾಷೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಲಿದ್ದಾರೆ ಮೋದಿ: ಪ್ರಧಾನಿಗಳ ನಾಳೆಯ ಭಾಷಣ ಸ್ಪೆಷಲ್

ಮುಂದಿನ ಸುದ್ದಿ
Show comments